[1]ಮಂಗಳೂರು: ನಾಪತ್ತೆಯಾಗಿದ್ದ ಅಡಿಕೆ ವ್ಯಾಪಾರಿ ಕೋಣಾಜೆ ಸಮೀಪದ ತೌಡುಗೋಳಿ ಕಾಡಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ನೇಣುಬಿಗಿದ ಸ್ಥಿತಿಯಲ್ಲಿ ಅಬ್ದುಲ್ ಅಜೀಜ್ (58) ಎಂಬುವರು ಪತ್ತೆ ಆಗಿದ್ದಾರೆ. ಏ. 14 ರಂದು ಅಬ್ದುಲ್ ಅಜೀಜ್ ನಾಪತ್ತೆಯಾಗಿದ್ದರು.
ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಕೋಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.