[1]ಮಂಡ್ಯ: ನಾನು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ವರ್ತನೆಗೆ ಬೇಸತ್ತು ಕಾಂಗ್ರೆಸ್ ಹೈಕಮಾಂಡ್ ಇದೀಗ ರವಿ ಕುಮಾರ್ ಗಣಿಗ ಅವರಿಗೆ ಬಿ ಫಾರಂ ಕೊಟ್ಟಿದೆ ಎನ್ನಲಾಗುತ್ತಿದೆ.
ನಾನು ಯಾವುದೇ ಕಾರಣಕ್ಕೂ ಸ್ಪರ್ಧಿಸಲ್ಲ. ನಾನು ಸ್ಪರ್ಧಿಸಿದರೂ, ಸೋಲುತ್ತೇನೆ ಎನ್ನುವ ಮಾತನ್ನು ಪಕ್ಷದವರೇ ಆಡಿಕೊಂಡು ತಿರುಗುತ್ತಿದ್ದಾರೆ. ಹೀಗಿರುವಾಗ ನಾನೇಕೆ ಸ್ಪರ್ಧೆ ಮಾಡಲಿ ಎಂದು ಅಂಬಿ ಪ್ರಶ್ನಿಸಿದ್ದರು. ಅವರ ಹೇಳಿಕೆಗೆ ಬೇಸತ್ತು ಕಾಂಗ್ರೆಸ್ ಹೈಕಮಾಂಡ್ ಯೂಟರ್ನ್ ತೆಗೆದಿಕೊಂಡಿದ್ದು ರವಿಕುಮಾರ್ ಗಣಿಗಾ ಅವರಿಗೆ ಮಂಡ್ಯದ ಕೈ ಟಿಕೆಟ್ನ್ನು ಘೋಷಿಸಿದೆ ಎನ್ನಲಾಗುತ್ತಿದೆ.
ಟಿಕೆಟ್ ಹಂಚಿಕೆ ಕುರಿತು ಕೆಪಿಸಿಸಿ ಅಧ್ಯಕ್ಷರ ಮನೆಗೆ ಬರುವಂತೆ ಅಂಬಿಯನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಕ್ಯಾರೆ ಅನ್ನದ ಅಂಬಿ ವರ್ತನೆಗೆ ಬೇಸತ್ತ ಕೈ ಹೈಕಮಾಂಡ್ ರವಿಕುಮಾರ್ ಗಣಿಗಾ ಅವರಿಗೆ ಟಿಕೆಟ್ ನೀಡಿದೆ. ಜಿಲ್ಲಾ ಕಾಂಗ್ರೆಸ್ ನಾಯಕತ್ವವನ್ನು ಕೈ ಹೈಕಮಾಂಡ್ ಚಲುವರಾಯಸ್ವಾಮಿ ಹೆಗಲಿಗೆ ಹೊರಿಸಿದ್ದು ಗಣಿಗಾ ರವಿಕುಮಾರ್ಗೆ ಟಿಕೆಟ್ ನೀಡಿದ್ದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.