- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಣಿನಾಲ್ಕೂರಿನ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮರಳಿ ಕಾಂಗ್ರೆಸ್ ಗೆ – ತೀವ್ರ ಮುಖಭಂಗಕ್ಕೆ ಒಳಗಾದ ಬಿಜೆಪಿ

congr-election [1]ಬಂಟ್ವಾಳ: ಏನೇ ಮಾಡಿದರೂ ಬಂಟ್ವಾಳ ಕ್ಷೇತ್ರದ ಜನರ ಕಣ್ಣಿಗೆ ಮಣ್ಣರಚಿರಬೇಕು ಎಂದು ನಿರ್ಧರಿಸಿರುವ ಬಿಜೆಪಿ, ಸೇರ್ಪಡೆ ಸುದ್ದಿಗಾಗಿ ಶತ ಪ್ರಯತ್ನ ನಡೆಸುತ್ತಿದೆ. ಈ‌‌ ಸೇರ್ಪಡೆ ಸುದ್ದಿಗೆ ಸರ್ಕಸ್ ನಡೆಸಿದ ಬಿಜೆಪಿ,‌ಮಣಿನಾಲ್ಕೂರಿನಲ್ಲಿ ತೀವ್ರ ಮುಖಭಂಗಕ್ಕೆ‌ ಒಳಗಾಗಿದೆ. ಅದರಂತೆ ಮಣಿನಾಲ್ಕೂರು ಗ್ರಾ. ಪಂ. ಉಪಾಧ್ಯಕ್ಷ ದಿನೇಶ್ ನಾಯಕ್ ಮರಳಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

‘ಬಿಜೆಪಿ ಸೇರ್ಪಡೆಗೊಂಡ ನಂತರ ನನಗೆ ಪಶ್ಚಾತ್ತಾಪವಾಯಿತು ಬಿಜೆಪಿಯವರ‌ ಸುಳ್ಳುಗಳ ವಿರುದ್ದ ಹೋರಾಡುತ್ತಿರುವ ರಮಾನಾಥ ರೈರವರಿಗೆ ಬಲ‌ತುಂಬ ಬೇಕೆನಿಸಿತು.

ಇಂತಹ ಅಭಿವೃದ್ಧಿ ಪುರುಷನನ್ನು ಕಾಣಲು ಸಾಧ್ಯವಿಲ್ಲ. ಆ ಕಾರಣದಿಂದ ನಾನು ಮರಳಿ ಕಾಂಗ್ರೆಸ್ ಗೆ ಬಂದಿದ್ದು, ನಾನು ಜೀವನ ಪರ್ಯಂತ ಕಾಂಗ್ರೆಸ್ ನಲ್ಲಿ ಇರುತ್ತೇನೆ’ ಎಂದು ಮರಳಿ ಕಾಂಗ್ರೆಸ್ ಸೇರ್ಪಡೆಗೊಳ್ಳುವಾಗ ಪ್ರತಿಕ್ರಿಯಿಸಿದರು