- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಸ್ ಡಿ ಪಿ‌ ಐ ಗೆ ಹಣ ಕೊಟ್ಟು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ಹರಿಕೃಷ್ಣ ಬಂಟ್ವಾಳ

harikrishna-bantwal [1]ಮಂಗಳೂರು: ಎಸ್ ಡಿ ಪಿ ಐ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್ ವರದಕ್ಷಿಣೆ ಕೊಟ್ಟು ಎಸ್.ಡಿ.ಪಿ.ಐನೊಂದಿಗೆ ನಿಖಾ‌ ಮಾಡಿದೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವರದಕ್ಷಿಣೆ ಕೊಟ್ಟು ಎಸ್ ಡಿ ಪಿ ಐ ನೊಂದಿಗೆ ನಿಖಾ‌ ಮಾಡಿದೆ. ಎಸ್ ಡಿ ಪಿ‌ ಐ ಗೆ ಹಣ ಕೊಟ್ಟು ಹೊಂದಾಣಿಕೆ ಮಾಡಿದೆ ಎಂದು ಸುದ್ದಿ ಹರಿದಾಡುತ್ತಿದೆ. ಇದರ ಹಿಂದೆ ರಮನಾಥ ರೈ ಇದ್ದಾರೆ. ಹಿಂದೊಮ್ಮೆ ‌ರಮನಾಥ ರೈ ಮುಸ್ಲಿಂ ರಿಂದ ನಾನು ಅಧಿಕಾರಕ್ಕೆ ಬಂದಿದ್ದೆ ಎಂದು ಹೇಳಿದ್ದರು.

ಅವರು ಆಗಲೆ‌ ಎಸ್ ಡಿ ಪಿ ಐ ಜೊತೆ ಹೊಂದಾಣಿಕೆ ಮಾಡಿದ್ದರು ಎಂದು ಈಗ ಗೊತ್ತಾಗುತ್ತಿದೆ ಎಂದು ರಮಾನಾಥ್ ರೈ ವಿರುದ್ಧ ವಿರುದ್ದ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದರು.