- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಳ್ತಂಗಡಿಯಲ್ಲಿ ಕಾಂಗ್ರೆಸ್ಸ್ ಕಾರ್ಯಕರ್ತರ ಮೇಲೆ ವಾಮಾಚಾರ, ವೋಟಿಗಾಗಿ ದುಡ್ಡಿನ ಕಂತೆ ಎಸೆಯುತ್ತಾರೆ

Vasanth Bangera [1]ಬೆಳ್ತಂಗಡಿ : ಈ ಬಾರಿ ಕಾಂಗ್ರೆಸ್ಸ್‌ನ್ನು ಹೇಗಾದರು ಮಾಡಿ ಸೋಲಿಸ ಬೇಕು, ಅದಕ್ಕಾಗಿ ನಮ್ಮ ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಗೆಳೆಯರು ವಾಮಾಚಾರ ಮಾಡುತ್ತಾರೆ ಎಂದು ವಸಂತ ಬಂಗೇರ ಆರೋಪಿಸಿದ್ದಾರೆ.

ಹರೀಶ್ ಪೂಂಜಾ ಗೆಳೆಯ ಪಿಡಬ್ಲೂಡಿ ಕಾಂಟ್ಟ್ರಾಕ್ಟರ್ ರಾಜೇಶ್ ಶೆಟ್ಟಿ ಮದ್ದಡ್ಕ ಎಂಬವರು ಕಾಂಗ್ರೆಸ್ಸ್ ಕಾರ್ಯಕರ್ತರಾದ ನಗರ ಪಂಚಾಯತ್ ಅಧ್ಯಕ್ಷ ನಾರಾಯಣ ರಾವ್ ಮತ್ತು ಗೇರು ಕಟ್ಟೆ ಕರೀಂ ಅವರ ಮನೆಯ ಮುಂದೆ ವಾಮಾಚಾರ ಮಾಡಿದ್ದಾರೆ.

ಗೇರು ಕಟ್ಟೆ ಕರೀಂ ಅವರ ಮನೆಯ ಮುಂದೆ ವಾಮಾಚಾರ ಮಾಡುವಾಗ ಸಿಕ್ಕಿ ಬಿದ್ದು ಅವರನ್ನು ವಿಚಾರಿಸಿದಾಗ ಅವರು ಮೊದಲು ಒಪ್ಪಿಕೊಳ್ಳಲಿಲ್ಲ. ಬಳಿಕ ತಪ್ಪು ಒಪ್ಪಿಕೊಂಡದನ್ನು ಕರೀಂ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದೆ.

ಹೀಗೆ ಕೆಲವೆಡೆ ಹರೀಶ್ ಪೂಂಜಾ ಬೆಂಬಲಿಗರು ವಾಮಾಚಾರ ಮಾಡುತ್ತಿದ್ದು ಕಾಂಗ್ರೆಸ್ಸ್ ಕಾರ್ಯಕರ್ತರ ಶಕ್ತಿ ಕುಂದಿಸುವ ಪ್ರಯತ್ನ ಇದಾಗಿದೆ. ಗೆಲ್ಲಲು ನೇರ ಮಾರ್ಗದಿಂದ ಸಾಧ್ಯವಿಲ್ಲದೆ ಹೀಗೆ ಮಾಮಮಾರ್ಗದಿಂದ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಸಂತ ಬಂಗೇರ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ ಮತದಾರರಿಗೆ ಹಣದ ಆಮಿಷವೊಡ್ಡಿ ಐವತ್ತು ಸಾವಿರ, ಒಂದು ಲಕ್ಷ ಹೀಗೆ ಹಣದ ಕಂತೆಗಳನ್ನು ಕೊಡುವುದನ್ನು ನಮ್ಮ ಕಾರ್ಯಕರ್ತರು ನೋಡಿದ್ದಾರೆ. ಹಾಗಗಿ ಅವರ ಚಲನ ವಲನಗಳನ್ನು ನೋಡಲು ಪೊಲೀಸರಿಗೆ ದೂರು ಕೊಡುವುದಾಗಿ ಅವರು ಹೇಳಿದ್ದಾರೆ.