- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ಮಶಾನದಲ್ಲಿ ಶಾಸಕ ಜೆ. ಆರ್. ಲೋಬೋ ವಿರುದ್ಧ ವಾಮಾಚಾರ!

j-r-lobo [1]ಮಂಗಳೂರು: ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ.ಆರ್. ಲೋಬೋ ವಿರುದ್ಧ ವಾಮಾಚಾರ ನಡೆದಿದೆ ಎಂದು ಶಂಕಿಸಲಾಗಿರುವ ಘಟನೆ ಮಂಗಳೂರಿನ ನಂದಿಗುಡ್ಡೆ ಸ್ಮಶಾನದಲ್ಲಿ ನಡೆದಿದೆ.

ನಂದಿಗುಡ್ಡೆ ಸ್ಮಶಾನದಲ್ಲಿ ಎರಡು ದಿನಗಳ ಹಿಂದೆ ಕೇರಳದಿಂದ ಬಂದವರು ಪೂಜೆ ನಡೆಸಿದ್ದಾರಂತೆ. ಅದನ್ನು ಪರಿಶೀಲಿಸಲು ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಸ್ಮಶಾನಕ್ಕೆ ಹೋಗಿದ್ದಾರೆ. ಅಲ್ಲಿ ವಾಮಾಚಾರ ಮಾಡಲಾಗಿದೆ ಎಂದು ಸಂಶಕಿಸಲಾದ ಪ್ರತಿಕೃತಿಯನ್ನು ಅವರು ಬಿಡಿಸಿ ನೋಡಿದಾಗ ಅದರಲ್ಲಿ ಮಲಯಾಳಂ ಭಾಷೆಯಲ್ಲಿ ಜೆ ಆರ್ ಲೋಬೋ ಹೆಸರು ಬರೆದಿರುವುದು ಬಯಲಾಗಿದೆ.

ನರೇಂದ್ರ ನಾಯಕ್ ಇದೊಂದು ಮೂಢನಂಬಿಕೆ ಎಂದು ತೋರಿಸಲು ಪ್ರತಿಕೃತಿಗೆ ಹಾಕಲಾದ ದಾರ, ಬಟ್ಟೆಯನ್ನು ಬಿಚ್ಚಿ ನೋಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇದು ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಲೋಬೋ ಹೆಸರಿರುವ ಚೀಟಿ ಕಾಣಿಸಿಕೊಂಡಿರುವುದರಿಂದ ಇದು ಅವರ ವಿರುದ್ಧ ಮಾಡಲಾದ ವಾಮಾಚಾರ ಎಂಬ ಸಂಶಯ ವ್ಯಕ್ತವಾಗಿದೆ.