- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಶ್ರೀರಾಮುಲು ವಿರುದ್ಧ ಪ್ರಚಾರ ಮಾಡ್ತಿಲ್ಲ… ಸುದೀಪ್ ಸ್ಟಷ್ಟನೆ

sriramulu [1]ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಚಿತ್ರನಟ-ನಟಿಯರು ಪ್ರಚಾರ ಕಾರ್ಯದಲ್ಲಿ ಭಾಗವಹಿಸೋದ್ರಲ್ಲಿ ಸಖತ್ ಬ್ಯುಸಿಯಾಗಿರ್ತಾರೆ. ಸುದೀಪ್, ಯಶ್ ಸೇರಿದಂತೆ ಅನೇಕರು ಈಗಾಗಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ, ಬದಾಮಿಯ ಪ್ರಚಾರದ ಬಗ್ಗೆ ಒಂದಷ್ಟು ಗೊಂದಲಗಳು ಹರಿದಾಡುತ್ತಿದ್ದವು. ಬದಾಮಿಯಲ್ಲಿ ಸುದೀಪ್ ಸಿಎಂ ಸಿದ್ಧರಾಮಯ್ಯ ಪರ ಪ್ರಚಾರಕ್ಕೆ ಬರ್ತಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.

ಶ್ರೀರಾಮುಲು ಬೆಂಬಲಿಗರು ಮತ್ತು ವಾಲ್ಮೀಕಿ ಜನಾಂಗದವರು ಸಿಎಂ ಪರ ಸುದೀಪ್ ಪ್ರಚಾರವನ್ನು ವಿರೋಧಿಸಿದ್ದರು. ಇದಕ್ಕೆ ಸುದೀಪ್ ಪ್ರತಿಕ್ರಿಯೆ ನೀಡಿದ್ದು ತಾನು ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದಿಲ್ಲ ಎಂದಿದ್ದಾರೆ.

ಬದಾಮಿಯಲ್ಲಿ ಸಿಎಂ ಪರವಾಗಿ ಸುದೀಪ್ ಕ್ಯಾಂಪೇನ್ ಮಾಡೋದಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ. ಅಂದ್ರೆ ಬದಾಮಿ ಪ್ರಚಾರದಲ್ಲಿ ಸುದೀಪ್ ತಟಸ್ಥರಾಗಲಿದ್ದಾರೆ. ಇದೆಲ್ಲಾ ಸುದ್ದಿ ಹಬ್ಬುವ ಮುನ್ನ ನನ್ನನ್ನೊಮ್ಮೆ ಕೇಳಿದ್ದರೆ ಒಳ್ಳೆಯದಿತ್ತು, ಶ್ರೀರಾಮುಲು ನನ್ನ ಬಹುಕಾಲದ ಗೆಳೆಯ ಎಂದು ಸುದೀಪ್ ಟ್ವೀಟಿಸಿದ್ದಾರೆ.