ಮಂಗಳೂರು: ಲಂಡನ್ನಲ್ಲಿರುವ ಸಂಗಮ ಕನ್ನಡಿಗರ ಸಂಸ್ಥೆ ಲಂಡನ್ನಲ್ಲಿ ಅ. 22 ಮತ್ತು 23ರಂದು ಆಯೋಜಿಸಿರುವ ‘ವಿಶ್ವ ಕನ್ನಡ ಸಮ್ಮೇಳನ ಯುರೋಪ್ – 2011’ ಕ್ಕೆ ಕನ್ನಡದ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರು ಆಹ್ವಾನಿತರಾಗಿದ್ದು, ಹಾಸ್ಯ ಸಾಹಿತ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಹಾಸ್ಯ ಲೇಖಕಿಯಾಗಿರುವ ಹೆಗಡೆ ಅವರು ಮಂಗಳೂರು ವಿ.ವಿ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ.
ಕರ್ನಾಟಕ ಹಲವು ಪ್ರಮುಖ ಸಾಹಿತಿಗಳು, ಸಿನಿಮಾ ಕಲಾವಿದರು, ಗಾಯಕರು ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿದ್ದಾರೆ.