[1]ಬೆಂಗಳೂರು: ಆಪರೇಷನ್ ಕಮಲ ಭೀತಿಯಿಂದ ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಹೈದರಾಬಾದ್ಗೆ ಬಂದಿಳಿದಿದ್ದಾರೆ.
ಬೆಂಗಳೂರು ಶಾಂಗ್ರಿಲಾ ಹೋಟೆಲ್ ಮತ್ತು ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾತ್ರಿ ಬಸ್ಗಳ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಹೊರಡುವ ಮುನ್ನ ಶಾಸಕರು ಎಲ್ಲಿಗೆ ಹೋಗಲಿದ್ದಾರೆ ಎಂಬ ರಹಸ್ಯವನ್ನೂ ಬಿಟ್ಟುಕೊಟ್ಟಿರಲಿಲ್ಲ.
ಇದೀಗ ಇಂದು ಬೆಳಗ್ಗೆ ಹೈದರಾಬಾದ್ಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಶಾಸಕರು ಆಗಮಿಸಿದ್ದಾರೆ. ಶಾಸಕರು ಇಲ್ಲಿನ ಪಾರ್ಕ್ ಹಯಾತ್ ಹೋಟೆಲ್ ಮತ್ತು ಗೋಲ್ಗೊಂಡ ರೆಸಾರ್ಟ್ಗೆ ತಲುಪಿದ್ದಾರೆ.
ಇದೇ ವೇಳೆ ಇನ್ನು ಕೆಲವರು ಮಾರ್ಗದಲ್ಲೇ ಇದ್ದಾರೆ ಎಂದು ಹೇಳಲಾಗಿದೆ. ಶಾಸಕರನ್ನು ಸುರಕ್ಷಿತಯಾಗಿ ಕಾಪಾಡಿಕೊಳ್ಳಲು ಹೈದರಾಬಾದ್ ಸರಿಯಾದ ಸ್ಥಳ ಎಂಬ ಉದ್ದೇಶದಿಂದ ಇಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಗೊತ್ತಾಗಿದೆ.