- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸದನದಲ್ಲಿ ನಮಗೆ ಬಹುಮತ ಸಾಬೀತಾಗುವುದು ಖಚಿತ: ಡಿ.ಕೆ. ಶಿವಕುಮಾರ್

shivkumar [1]ಬೆಂಗಳೂರು: ನಮ್ಮ ಎಲ್ಲಾ ಶಾಸಕರೂ ಕಾಂಗ್ರೆಸ್ ಪರವಾಗಿ ಓಟ್ ಮಾಡಲಿದ್ದಾರೆ. ಸದನದಲ್ಲಿ ನಮಗೆ ಬಹುಮತ ಸಾಬೀತಾಗುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ವಿಧಾನಸೌಧದ ಬಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪ್ರತಾಪ್ ಗೌಡ, ಆನಂದ್ ಸಿಂಗ್ ಅವರನ್ನು ಯಾರು ಕರ್ಕೊಂಡು ಹೋಗಿದ್ದಾರೆ ಎಂದು ನಾನು ನನ್ನ ಬಾಯಲ್ಲಿ ಹೇಳುವುದಿಲ್ಲ. ಆನಂದ್ ಸಿಂಗ್ ಕೆಲವೇ ಕ್ಷಣಗಳಲ್ಲಿ ಆಗಮಿಸಲಿದ್ದಾರೆ. ನಮ್ಮ ಪರವಾಗಿ ಮತ ಹಾಕಲಿದ್ದಾರೆ ಎಂದು ಹೇಳಿದರು.

ಪ್ರತಾಪ್ ಗೌಡ ಪಾಟೀಲ್ ಪ್ರಮಾಣವಚನ ಸ್ವೀಕರಿಸುತ್ತಾರೆ. ಪ್ರತಾಪ್ ಗೌಡ ಕಾಂಗ್ರೆಸ್ ಪರವಾಗಿದ್ದಾರೆ. ಯಡಿಯೂರಪ್ಪ ವಿರುದ್ಧ ಮತ ಹಾಕಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.