- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆರ್‌ಆರ್‌ ನಗರದಲ್ಲಿ ಚುನಾವಣೆ ಹಿನ್ನೆಲೆ ಬಂದ್‌ ಇಲ್ಲ: ಬಿ.ಎಸ್.ಯಡಿಯೂರಪ್ಪ

yedeyurappa-bjp [1]ಬೆಂಗಳೂರು: ಆರ್‌ ಆರ್‌ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಕರೆ ನೀಡಿದ್ದ ಬಂದ್ ಮಾಡದಿರಲು ಬಿಜೆಪಿ ನಿರ್ಧರಿಸಿದೆ.

ಬೆಂಗಳೂರು ಹೊರತುಪಡೆಸಿ, ರಾಜ್ಯಾದ್ಯಂತ ರೈತರು ಕರೆ ನೀಡಿರುವ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಆರ್‌ ಆರ್‌ ನಗರದಲ್ಲಿ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಪರ ಚುನಾವಣೆ ಪ್ರಚಾರ ನಡೆಸಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಾಲಮನ್ನಾ ಮಾಡುವಂತೆ ರೈತರು ಬಂದ್ ನಡೆಸಲು ನಿರ್ಧರಿಸಿದ್ದಾರೆ. ಅವರಿಗೆ ಪಕ್ಷದ ಬೆಂಬಲವಿದೆ ಎಂದಷ್ಟೇ ಹೇಳಿದ್ದೆ. ಬಿಜೆಪಿಯೇ ಬಂದ್‌ ಆಚರಿಸುತ್ತೆ ಅಂತಾ ಹೇಳಿರಲಿಲ್ಲ ಎಂದು ಬಿಎಸ್‌ವೈ ಹೇಳಿದ್ದಾರೆ. ಈ ಮೂಲಕ ಅವರು, ನಿನ್ನೆ ಸದನದಲ್ಲಿ ನೀಡಿದ್ದ ಹೇಳಿಕೆಗೆ ಯೂ ಟರ್ನ್‌ ಹೊಡೆದಿದ್ದಾರೆ.