- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿ ಕಾಂಡಮ್ ಪ್ಯಾಕೇಟು ಹಾಕಿದ ಕಳ್ಳರ ಗತಿ ಏನಾಯ್ತು ನೋಡಿ?

Katapady [1]
ಉಡುಪಿ : ಉಡುಪಿ ಜಿಲ್ಲೆಯ ಕಟಪಾಡಿಯ ಪೇಟೆಬೆಟ್ಟು ಬಬ್ಬುಸ್ವಾಮಿ ಸನ್ನಿಧಾನದಲ್ಲಿ ಕೊರಗಜ್ಜನ ಪವಾಡದಿಂದ ಕ್ಷೇತ್ರದ ಕಾಣಿಕೆ ಹುಂಡಿಯ ಹಣವನ್ನು ಕದ್ದ ಮುಸ್ಲಿಂ ಯುವಕರ ಗುಂಪು ಕ್ಷಮೆ ಕೇಳಿದ ಘಟನೆ ಕಟಪಾಡಿಯಲ್ಲಿ ನಡೆದಿದೆ.

ಹಣ ಕದ್ದ ನಂತರ ಶಿವಲಿಂಗದ ಮಾದರಿಯಲ್ಲಿರುವ ಕಾಣಿಕೆ ಡಬ್ಬಿಗೆ ಮೂತ್ರ ವಿಸರ್ಜನೆ ಮಾಡಿದ್ದೂ ಅಲ್ಲದೆ, ಕಾಂಡಮ್ ಪ್ಯಾಕೇಟುಗಳನ್ನು ಡಬ್ಬಿಗೆ ತುರುಕಿದ್ದರು. ದೈವ ಏನು ಮಾಡುತ್ತೆ ಅಂತಾ ನೋಡೊಣ ಅನ್ನುತ್ತಲೆ ಈ ವರ್ತನೆಗಳನ್ನ ಯುವಕರ ತಂಡ ಮಾಡಿತ್ತು.

ಆದರೆ ದೈವದ ಲೀಲೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ಈ ಅನಾಗರಿಕ ವರ್ತನೆ ತೋರಿದ ಕೆಲವೇ ದಿನಗಳಲ್ಲಿ ತಂಡದಲ್ಲಿದ್ದ ಅಪ್ರಾಪ್ತ ಬಾಲಕನೊಬ್ಬನ ದೇಹ ಸ್ಥಿತಿಯಲ್ಲಿ ಗಂಭೀರ ಪರಿಣಾಮ ಗಳು ಕಂಡು ಬಂದಿತ್ತು.

ಆತನ ಸೊಂಟದ ಕೆಳಗೆ ಅಂದರೆ ಕಾಲಿನ ಭಾಗ ಬಲ ಕಳೆದುಕೊಂಡು ಹಾಸಿಗೆ ಹಿಡಿದಿದ್ದ. ಈ ಬಗ್ಗೆ ವೈದ್ಯರಿಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ .

ಯುವಕರ ಕುಟುಂಬ ಹಿಂದೂಗಳೊಂದಿಗೆ ಉತ್ತಮ ಒಡನಾಟವಿದ್ದ ಕಾರಣ ಜ್ಯೋತಿಷಿಯ ಮೊರೆ ಹೋಗುತ್ತಾರೆ. ಆಗ ಕೊರಗಜ್ಜನಿಗೆ ಮಾಡಿದ ಅಪಚಾರದ ಬಗ್ಗೆ ಹೇಳುತ್ತಾರೆ.

ಅದರಂತೆ  ಮುಸ್ಲಿಮರ ಕುಟುಂಬ  ಕೊರಗಜ್ಜ ಸ್ಥಾನಕ್ಕೆ ಬಂದು ನೊಂದ ವಿಷಯ ತಿಳಿಸುತ್ತಾರೆ. ಈ ನಡುವೆ ಕಾಣಿಕೆ ಡಬ್ಬಿ ತೆರೆದು ನೋಡಿದ ಕ್ಷೇತ್ರದ ಆಡಳಿತ ಮಂಡಳಿಗೂ ಕಿಡಿಗೇಡಿಗಳ ಕೃತ್ಯ ಅರಿವಿಗೆ ಬಂದಿರುತ್ತೆ. ಕೊನೆಗೆ‌ ಕುಟುಂಬದ ಕೋರಿಕೆಯಂತೆ ಕೊರಗಜ್ಜ ದರ್ಶನ ಏರ್ಪಾಟು‌ ಮಾಡಲಾಗುತ್ತದೆ.

ಅಪಚಾರ ಮಾಡಿದ ಅಪ್ರಾಪ್ತ ಬಾಲಕ ದೈವದ ಕ್ಷಮೆ ಕೊರಿದ್ದಾನೆ. ಇಂತಹಾ ಕೃತ್ಯ ಮಾಡಕೂಡದು ಎಂದು ದೈವ ಎಚ್ಚರಿಸಿದೆ.

Katapady1 [2]