- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚಾಲೆಂಜಿಂಗ್‌ ಸ್ಟಾರ್‌‌ ಜೊತೆ ಸೆಲ್ಫಿಗೆ ಮುಗಿಬಿದ್ದ ಮಂಗಳೂರಿಗರು

darshan [1]ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರ್‌ನಲ್ಲಿ‌ ಆಯೋಜಿಸಲಾಗಿದ್ದ ಯಕ್ಷ ದ್ರುವ ಪಟ್ಲ ಸಂಭ್ರಮದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅವರ ಜೊತೆ ಮಂಗಳೂರು ಜನರು ಸೆಲ್ಫಿಗೆ ಮುಗಿಬಿದ್ದರು

ಕಾರ್ಯಕ್ರಮಕ್ಕೆ ನಿಗದಿತ ಅವಧಿಗಿಂತ ವಿಳಂಬವಾಗಿ ಬಂದ ದರ್ಶನ್ ಅವರ ಆಗಮನಕ್ಕಾಗಿ ಮೂರು ಗಂಟೆಗಳ‌ ಕಾಲ ಜನರು ವೇದಿಕೆ ಮುಂಭಾಗದಲ್ಲಿ ಕಾದು ನಿಂತಿದ್ದರು.

ಬಳಿಕ ದರ್ಶನ್ ಕಾರಿನಿಂದ ಇಳಿಯುತ್ತಿದ್ದಂತೆ ಅವರಿಗಾಗಿ ಕಾಯುತ್ತಿದ್ದ ಜನರು ದರ್ಶನ್‌ ಸಭಾಂಗಣದ ಒಳಗೆ ಹೋಗುವ ದಾರಿಯುದ್ದಕ್ಕೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡರು.