- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರಲ್ಲಿ ಭೀಕರ ಅಪಘಾತ: ಸಂಬಂಧಿಕರ ಮನೆಗೆ ಹೊರಟಿದ್ದ ದಂಪತಿ ಸಾವು

accident [1]ಮಂಗಳೂರು: ಮಂಗಳೂರಿನ ನಂತೂರ್ ಸರ್ಕಲ್ ಬಳಿ ನಡೆದ ಟೆಂಪೋ ಮತ್ತು ದ್ವಿಚಕ್ರ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.

ಮೃತರನ್ನು ಉಡುಪಿ ಜಿಲ್ಲೆಯ ಕಾಪುವಿನ ನಿವಾಸಿ ಮುಹಮ್ಮದ್ ಸಮೀರ್ (32) ಮತ್ತು ಅವರ ಪತ್ನಿ ಪುತ್ತೂರಿನ ಅಮ್ರೀನ್ (20) ಎಂದು ಗುರುತಿಸಲಾಗಿದೆ.

ಸಮೀರ್ ಮತ್ತು ಅಮ್ರೀನ್ ಸಂಜೆ ಸಂಬಂಧಿಕರ ಮನೆಗೆಂದು ಕಾಪುವಿನಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಈ ವೇಳೆ ನಂತೂರ್ ವೃತ್ತದ ಬಳಿ ಈಚರ್ ಟೆಂಪೋವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಮ್ರೀನ್ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರು. ಸಮೀರ್ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.