ಭಾರಿ ಮಳೆ-ಗಾಳಿಗೆ ಟೆಂಟ್‌ ಮೇಲೆ ಉರುಳಿದ ಮರ…ಕಾರ್ಮಿಕ ಸ್ಥಳದಲ್ಲೇ ಸಾವು

9:42 AM, Thursday, June 21st, 2018
Share
1 Star2 Stars3 Stars4 Stars5 Stars
(No Ratings Yet)
Loading...

heavy-rainಮಂಗಳೂರು: ಅಶ್ವಥ ಮರವೊಂದು ಮಗುಚಿ ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್‌ನಲ್ಲಿ ನಡೆದಿದೆ.

ಉತ್ತರಪ್ರದೇಶದ ಉನ್ನಾವ್‌ನ ಸೇವಾ ನಾಯ್ಕ್ (36) ಮೃತ ಕಾರ್ಮಿಕ ಎಂದು ತಿಳಿದು ಬಂದಿದೆ. ಮರದಡಿಯಲ್ಲಿ ಟೆಂಟ್ ಹಾಕಿ ಸಿಮೆಂಟ್‌ನಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದ ವೇಳೆ ಅಶ್ವಥ ಮರ ಬಿದ್ದು ಸೇವಾ ನಾಯ್ಕ್‌ ಮೃತಪಟ್ಟಿದ್ದಾನೆ.

ಭಾರಿ ಗಾಳಿ ಮಳೆಯ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. ಕಲಾಕೃತಿಗಳನ್ನು ರಚಿಸುತ್ತಿದ್ದ ಟೆಂಟ್ ಮೇಲೆ ಮರ ಬಿದ್ದಿದೆ. ಈ ಸಂದರ್ಭದಲ್ಲಿ ದಿಲೀಪ್ ಎಂಬ ಮತ್ತೋರ್ವ ಕಾರ್ಮಿಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English