- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಭಾರಿ ಮಳೆ-ಗಾಳಿಗೆ ಟೆಂಟ್‌ ಮೇಲೆ ಉರುಳಿದ ಮರ…ಕಾರ್ಮಿಕ ಸ್ಥಳದಲ್ಲೇ ಸಾವು

heavy-rain [1]ಮಂಗಳೂರು: ಅಶ್ವಥ ಮರವೊಂದು ಮಗುಚಿ ಬಿದ್ದು ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಮೆಲ್ಕಾರ್‌ನಲ್ಲಿ ನಡೆದಿದೆ.

ಉತ್ತರಪ್ರದೇಶದ ಉನ್ನಾವ್‌ನ ಸೇವಾ ನಾಯ್ಕ್ (36) ಮೃತ ಕಾರ್ಮಿಕ ಎಂದು ತಿಳಿದು ಬಂದಿದೆ. ಮರದಡಿಯಲ್ಲಿ ಟೆಂಟ್ ಹಾಕಿ ಸಿಮೆಂಟ್‌ನಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಿದ್ದ ವೇಳೆ ಅಶ್ವಥ ಮರ ಬಿದ್ದು ಸೇವಾ ನಾಯ್ಕ್‌ ಮೃತಪಟ್ಟಿದ್ದಾನೆ.

ಭಾರಿ ಗಾಳಿ ಮಳೆಯ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. ಕಲಾಕೃತಿಗಳನ್ನು ರಚಿಸುತ್ತಿದ್ದ ಟೆಂಟ್ ಮೇಲೆ ಮರ ಬಿದ್ದಿದೆ. ಈ ಸಂದರ್ಭದಲ್ಲಿ ದಿಲೀಪ್ ಎಂಬ ಮತ್ತೋರ್ವ ಕಾರ್ಮಿಕನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.