[1]ಉಜಿರೆ: ಹೊಸ್ಮಾರಿನ ಸಿದ್ದರವನ ಕ್ಷೇತ್ರದಲ್ಲಿ ಶುಕ್ರವಾರ ವೀರ ಸಾಗರ ಮುನಿ ಮಹಾರಾಜರ ಕೇಶಲೋಚನ ಕಾರ್ಯಕ್ರಮ ನಡೆಯಿತು.
ಜೈನಧರ್ಮದ ಸಂಪ್ರದಾಯದಂತೆ ದಿಗಂಬರ ಮುನಿಗಳು ತಮ್ಮ ತಲೆಯ ಕೂದಲನ್ನು ಕೈಯಿಂದ ಎಳೆದು ತೆಗೆಯುವುದಕ್ಕೆ ಕೇಶಲೋಚನ ಎನ್ನುತ್ತಾರೆ. ಊರ-ಪರವೂರ ಶ್ರಾವಕ – ಶ್ರಾವಕಿಯರು ಪವಿತ್ರ ಕಾರ್ಯವನ್ನು ವೀಕ್ಷಿಸಿದರು.
ಚಾತುರ್ಮಾಸ: 108 ಶ್ರೀ ವೀರ ಸಾಗರ ಮುನಿ ಮಹಾರಾಜರು ಕಾರ್ಕಳದಲ್ಲಿ ಚಾತುರ್ಮಾಸ ವೃತಾಚರಣೆ ಮಾಡಲಿದ್ದು ಇದೇ 11 ರಂದು ಬುಧವಾರ ಕಾರ್ಕಳ ಪುರಪ್ರವೇಶ ಮಾಡಲಿದ್ದಾರೆ.
ಕಾರ್ಕಳದ ಜೈನಮಠದ ಲಲಿತಕೀರ್ತಿ ಭಟ್ಟಾರಕರ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.