[1]ಮಂಗಳೂರು: ಮಂಗಳೂರಿನ ಮೂಡುಶೆಡ್ಡೆಯಲ್ಲಿ ಕಾಲುಜಾರಿ ಡ್ಯಾಮ್ ಗೆ ಬಿದ್ದಿದ್ದ ಯುವಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದ್ದು, ಇನ್ನೂ ಕೂಡ ಮೃತದೇಹ ಪತ್ತೆಯಾಗಿಲ್ಲ.
ವಾಮಂಜೂರಿನ ಅಂಬೇಡ್ಕರ್ ನಗರದ ಸುಶಾಂತ್ (20) ಎರಡು ದಿನಗಳ ಹಿಂದೆ ಮೂಡುಶೆಡ್ಡೆ ಡ್ಯಾಮ್ ನಲ್ಲಿ ಯುವಕ ಕಾಲುಜಾರಿ ಡ್ಯಾಮ್ ಗೆ ಬಿದ್ದಿದ್ದ. ಆದರೆ ಆತನ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಭಾರಿ ಮಳೆಯ ಹಿನ್ನೆಲೆಯಲ್ಲಿ ಬಂದಿದ್ದ ಎನ್ ಡಿ ಆರ್ ಎಫ್ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ. ಎರಡು ತಂಡಗಳಾಗಿ ಶೋಧ ಕಾರ್ಯ ಆರಂಭಿಸಿದ್ದು, ಒಂದು ತಂಡ ಕೂಳೂರು ನಿಂದ ತಣ್ಣೀರುಬಾವಿ ಮಧ್ಯೆ ಮತ್ತೊಂದು ತಂಡ ಮೂಡುಶೆಡ್ಡೆ ಡ್ಯಾಮ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದೆ.