[1]ಮಂಗಳೂರು: ಯುವಕನ ಕೊಲೆ ಯತ್ನ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ನೆತ್ತಿಕಲ್ಲಿ ಮನೆ ನಿವಾಸಿ ಪ್ರಕಾಶ್ ಆಚಾರ್ಯ (23) ಬಂಧಿತ ಆರೋಪಿ. ಜೂನ್ 11ರಂದು ಚೇತನ್ ಎಂಬವರ ಕೊಲೆಗೆ ಯುವಕರ ತಂಡವೊಂದು ಯತ್ನಿಸಿತ್ತು.
ಚೇತನ್ಗೆ ಪರಿಚಯಸ್ಥರಾದ ಕಿರಣ್, ಕಿರ್ತನ್, ಯೋಗಿಶ್, ಲೋಕೇಶ್, ಮೋಹನ್, ವಿದ್ಯಾಧರ್ ಹಾಗೂ ಪ್ರಕಾಶ್ ಕೊಲೆಗೆ ಯತ್ನಿಸಿದ್ದರು. ಈ ವೇಳೆ ಚೇತನ್ ಜೊತೆಗಿದ್ದ ರವಿರಾಜ್ ಮತ್ತು ನವೀನ್ ಕೊಲೆ ಯತ್ನ ತಡೆದ ಹಿನ್ನೆಲೆಯಲ್ಲಿ ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಮೊದಲು ಪೊಲೀಸರು ಕಿರಣ್, ಕೀರ್ತನ್, ಯೋಗಿಶ್ ಕೆ, ಲೊಕೇಶ್ ಕೆ, ಮೋಹನ್ ಪೂಜಾರಿ, ವಿದ್ಯಾಧರ್ ಪೂಜಾರಿ ಎಂಬವರನ್ನು ಬಂಧಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಪ್ರಕಾಶ್ ಆಚಾರ್ಯನನ್ನು ಕೂಡ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.