- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದಿರಾ ಕ್ಯಾಂಟೀನ್​ ಅವ್ಯವಹಾರ ಬಗ್ಗೆ ರಾಮದಾಸ್​ ಆರೋಪ: ಯು.ಟಿ.ಖಾದರ್ ಆಕ್ರೋಶ

u-t-kadher [1]ಮಂಗಳೂರು: ಇಂದಿರಾ ಕ್ಯಾಂಟೀನ್ನಲ್ಲಿ 50 ಕೋಟಿ ರೂ. ಅವ್ಯವಹಾರವಾಗಿದೆ ಎಂದು ಶಾಸಕ ರಾಮದಾಸ್ ಆರೋಪಕ್ಕೆ ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿರಾ ಕ್ಯಾಂಟೀನ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿಲ್ಲದೆ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾರು ಕೂಡ ಹಸಿದಿರಬಾರದು ಎಂದು ಮಾಡಿರುವ ಈ ಯೋಜನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದಿದೆ. ರಾಮದಾಸ್ ಅವರು ಯಾವುದೇ ಮಾಹಿತಿ ತಿಳಿದುಕೊಳ್ಳದೆ ಆರೋಪ ಮಾಡುತ್ತಿದ್ದಾರೆ. ಜನರಲ್ಲಿ ಗೊಂದಲ ಸೃಷ್ಟಿಸಿ ಹಿಟ್ ಆಂಡ್ ರನ್ ಮಾಡುವ ರೀತಿ ಅವರದು ಎಂದು ಟೀಕಿಸಿದರು.

ಸರ್ಕಾರ ಇಂದಿರಾ ಕ್ಯಾಂಟೀನ್ಗೆ ಈವರೆಗೆ ಖರ್ಚು ಮಾಡಿದ್ದು 173 ಕೋಟಿ. ಅದರಲ್ಲಿ 50 ಕೋಟಿ ಅವ್ಯವಹಾರವಾಗಿದೆ ಎನ್ನುತ್ತಾರೆ. ಆರೋಪ ಮಾಡುವ ಮೊದಲು ದಾಖಲೆ ನೀಡಲಿ ಎಂದು ಹೇಳಿದರು.