[1]ಮಂಗಳೂರು: ಹೋಂಡಾ ಸಿಟಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಿ ಪೊಲೀಸರ ತಪಾಸಣೆ ವೇಳೆ ಪರಾರಿಯಾಗಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಉಪ್ಪಳದ ಮೊಯಿದ್ದೀನ್ ನವಾಜ್ ಯಾನೆ ನವಾಜ್ ಬಂಧಿತ ಆರೋಪಿ. ಇಂದು ವಿಟ್ಲದ ಕನ್ಯಾನ ಬೈರಿಕಟ್ಟೆ ಎಂಬಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು 2017 ರ ಡಿಸೆಂಬರ್ 23 ರಂದು ರಾತ್ರಿ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಪೊಲೀಸರು ಕಾರು ತಪಾಸಣೆ ಮಾಡುವ ಸಂದರ್ಭದಲ್ಲಿ ಕಾರನ್ನು ಬಿಟ್ಟು ಪರಾರಿಯಾಗಿದ್ದನು. ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ 3 ಲಕ್ಷ ರೂ. ಮೌಲ್ಯದ 81 ಕೆ ಜಿ ಗಾಂಜಾ ದೊರೆತಿತ್ತು. ಈ ಪ್ರಕರಣ ಸಂಬಂಧ ಅಂದು ಕಾರಿನಿಂದ ತಪ್ಪಿಸಿಕೊಂಡ ಆರೋಪಿಯನ್ನು ಇಂದು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.