- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡಿ.ಕೆ.ಶಿವಕುಮಾರ್ ಅತ್ಯಾಪ್ತ ಬೆಂಬಲಿಗರ ಜೊತೆಗೆ ಶಬರಿ ಮಲೆಗೆ ಪಯಣ..!

shivkumar [1]ರಾಮನಗರ: ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹುಟ್ಟೂರಿನ ಅತ್ಯಾಪ್ತ ಬೆಂಬಲಿಗರ ಜೊತೆಗೆ ಶಬರಿ ಮಲೆಗೆ ಪಯಣ ಬೆಳೆಸಿದ್ದಾರೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಿಂದ ಸಚಿವರು ಪ್ರಯಾಣ ಆರಂಭಿಸಿದ್ದಾರೆ.

ನಿನ್ನೆ ಸಿಎಂ ಕುಮಾರಸ್ವಾಮಿ ಜೊತೆ ಕೆಆರ್ಎಸ್ಗೆ ಬಾಗಿನ ಅರ್ಪಿಸಿದ ನಂತರ ಮೈಸೂರಿನಲ್ಲಿ ಅಯ್ಯಪ್ಪನ ಮಾಲೆ ಧರಿಸಿ ಶಬರಿ ಮಲೆಗೆ ತಡರಾತ್ರಿ ಡಿಕೆಶಿ ಹೊರಟಿದ್ದಾರೆ. ಐಟಿ ಅಧಿಕಾರಿಗಳಿಂದ ಮುಕ್ತಗೊಂಡರೆ ಶಬರಿ ಮಲೆಗೆ ಬರೋದಾಗಿ ಹರಕೆ ಹೊತ್ತಿದ್ದ ಡಿಕೆಶಿ, ಈಗ ಹರಕೆ ತೀರಿಸಲು ಬೆಂಬಲಿಗರೊಂದಿಗೆ ಹೊರಟಿದ್ದಾರೆ.

ಡಿಕೆಶಿ ಜೊತೆಗೆ ಅವರ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮದ ಹತ್ತಕ್ಕೂ ಹೆಚ್ಚು ಬೆಂಬಲಿಗರು ಸಚಿವರಿಗೆ ಸಾಥ್ ನೀಡಿದ್ದಾರೆ.