- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಂಟರ ಸಂಘದ ಅಧ್ಯಕ್ಷರಾಗಿ ಆರ್. ಉಪೇಂದ್ರ ಶೆಟ್ಟಿ ಅವರು ಆಯ್ಕೆ

upendra [1]ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆರ್. ಉಪೇಂದ್ರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ 5323 ಪಡೆದು ಭಾರಿ ಮತಗಳಿಂದ ಜಯಗಳಿಸಿದ್ದಾರೆ. ಉಪೇಂದ್ರ ಶೆಟ್ಟಿ ಅವರು ಬೆಂಗಳೂರಿನ ಯೂನಿರ್ವಸೆಲ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ನಿರ್ದೇಶರಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಭೋಜರಾಜ ಶೆಟ್ಟಿ, ಅಮೃತಕ್ಕ ಎಸ್. ಶೆಟ್ಟಿ ಕಾರ್ಯದರ್ಶಿಯಾಗಿ ಮಧುಕರ್ ಎಂ. ಶೆಟ್ಟಿ, ಜಂಟಿ ಕಾರ್ಯದರ್ಶಿ ಸೌಮ್ಯ ಪ್ರಿಯ, ಖಜಾಂಚಿಯಾಗಿ ದೀಪಕ್ ಶೆಟ್ಟಿ ಅವರುಗಳು ಆಯ್ಕೆಯಾಗಿದ್ದಾರೆ

ಕಾರ್ಯಕಾರಿ ಸಮಿತಿಗೆ ಅಶೋಕ್ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, ಜಯಶ್ರೀ ರೈ, ಕಲಾವತಿ ಶೆಟ್ಟಿ , ಡಾ. ನಿಶಾಕಾಂತ್ ಶೆಟ್ಟಿ, ಪ್ರವೀಣಚಂದ್ರ ಶೆಟ್ಟಿ , ರಾಧಾಕೃಷ್ಣ ಶೆಟ್ಟಿ , ರಾಜೇಶ್ ಶೆಟ್ಟಿ, ಸದಾನಂದ್ ಸುಲಾಯ, ಸಂತೋಷ್ ಹೆಗ್ಡೆ , ಸುರೇಖಾ ಶೆಟ್ಟಿ , ಡಾ. ಉಮಾನಾಥ್ ಶೆಟ್ಟಿ , ಉಮೇಶ್ ಶೆಟ್ಟಿ , ವಿಜಯ್ ಹಾಲಾಡಿ ವಿಜಯ್ CA ಆಯ್ಕೆಯಾಗಿದ್ದಾರೆ.