ಮಂಗಳೂರು: ಭಾರಿ ಗಾಳಿ, ಮಳೆಗೆ ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಮೃತಪಟ್ಟ ಘಟನೆ ಮಂಗಳೂರಿನ ಉಳ್ಳಾಲದ ಉಳಿಯದ ಧರ್ಮರಸರ ಎಂಬಲ್ಲಿ ನಡೆದಿದೆ.
ಅಶೋಕ್ ಡಿಸೋಜ(28) ಮೃತ ಯುವಕ. ಅಶೋಕ್ ಡಿಸೋಜ ಅವರು ದಾರಿಯಲ್ಲಿ ನಡೆಯುತ್ತಿದ್ದಾಗ ತುಂಡಾಗಿ ಬಿದ್ದ ತಂತಿಯ ಅರಿವಿಲ್ಲದೆ ಅದನ್ನು ತುಳಿದಿದ್ದರು. ತಂತಿಯಲ್ಲಿ ವಿದ್ಯುತ್ ಸಂಪರ್ಕ ಇದ್ದ ಕಾರಣ ಯುವಕ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅಮಾಯಕನ ಸಾವಿಗೆ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
Click this button or press Ctrl+G to toggle between Kannada and English