- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಂತ್ರಸ್ತರಿಗೆ ಬಿಸ್ಕೆಟ್​ ಎಸೆದ ಸಚಿವ ರೇವಣ್ಣ ವರ್ತನೆಗೆ ನೆಟಿಜನ್ಸ್​ ಆಕ್ರೋಶ

hd-revanna [1]ಹಾಸನ: ನೆರೆ ಸಂತ್ರಸ್ತರ ಶಿಬಿರದಲ್ಲಿ ಅಮಾನವೀಯ ನಡೆ ತೋರಿದ್ದ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ವರ್ತನೆಗೆ ನೆಟಿಜನ್ಸ್ಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚೆಗೆ ಹಾಸನದ ರಾಮನಾಥಪುರ ಸಂತ್ರಸ್ತರ ಶಿಬಿರಕ್ಕೆ ಸಚಿವ ಹೆಚ್ ಡಿ ರೇವಣ್ಣ ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿದ್ದರು. ಈ ವೇಳೆ ಶಿಬಿರದಲ್ಲಿ ಸಂತ್ರಸ್ತರ ಕೈಗೆ ಬಿಸ್ಕೇಟ್ ಪ್ಯಾಕ್ ಕೊಡುವ ಬದಲು ಮೈಮೇಲೆ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ನೋಡಿರುವ ನೆಟಿಜೆನ್ಸ್ ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಅವರ ಈ ನಡೆಯನ್ನು ಜನರು ಖಂಡಿಸಿದ್ದಾರೆ.