ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಂಗಳೂರಿನಲ್ಲಿ ಇಂದು ಪುಟ್ಟ ಕಂದಮ್ಮಗಳಿಗೆ ಮುದ್ದುಕೃಷ್ಣ ವೇಷವನ್ನು ಹಾಕುವ ಮೂಲಕ ಮಕ್ಕಳ ಪೋಷಕರು ಸಂಭ್ರಮಿಸಿದರು.
ಮಂಗಳೂರಿನ ಖದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಕಳೆದ 34 ವರ್ಷಗಳಿಂದ ಮುದ್ದುಕೃಷ್ಣ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಸುಮಾರು ಮೂರು ಸಾವಿರ ಮಕ್ಕಳು ಮುದ್ದುಕೃಷ್ಣ, ಬಾಲಕೃಷ್ಣ, ರಾಧ ಕೃಷ್ಣರಾಗಿ ಸಂಭ್ರಮಿಸಿದರು.
ಮಂಗಳೂರಿನ ಕಲ್ಕೂರ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ 34 ವಿಭಾಗಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಒಂಬತ್ತು ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದರಿಂದ ಮಂಗಳೂರಿನ ಖದ್ರಿ ಮಂಜುನಾಥೇಶ್ವರ ದೇವಾಲಯದ ಆವರಣ ತುಂಬೆಲ್ಲ ಮುದ್ದುಕೃಷ್ಣ ವೇಷಧಾರಿಗಳೇ ಕಾಣಸಿಗುತ್ತಿದ್ದರು. ಮಕ್ಕಳಿಗೆ ಕೃಷ್ಣ ವೇಷ ಹಾಕಿ ಮಕ್ಕಳಲ್ಲಿ ಕೃಷ್ಣನನ್ನು ಕಂಡ ಪೋಷಕರು ಪುಳಕಿತರಾದರೆ ಇದನ್ನು ನೋಡಲೆಂದೇ ಒಂದೆಡೆ ಸೇರಿದ್ದ ಸಾವಿರಾರು ಮಂದಿ ಮುದ್ದುಕೃಷ್ಣರನ್ನು ನೋಡಿ ಸಂಭ್ರಮಪಟ್ಟರು.
Click this button or press Ctrl+G to toggle between Kannada and English