[1]ಹೈದರಾಬಾದ್: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗೂಡಿನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ವೊಂದು ಸಿಕ್ಕಿದೆ. ನನ್ನ ಗಂಡನನ್ನು ಕೊಲೆ ಮಾಡಿದ್ದು ಯಾರು ಅಲ್ಲ ನಮ್ಮ ತಂದೆಯೇ ಎಂದು ಮಗಳೊಬ್ಬಳು ಆರೋಪಿಸಿದ್ದಾರೆ.
ಮನೆಯವರ ವಿರುದ್ಧದ ನಡವೆಯೂ ಅಮೃತ ವರ್ಷಗಳ ಹಿಂದೆ ಪ್ರಣಯ್ನ ಜೊತೆ ಸಪ್ತಪದಿ ತುಳಿದಿದ್ದರು. ಪ್ರಣಯ್ ಜೊತೆ ಸುಖ ಸಂಸಾರ ನಡೆಸುತ್ತಿದ್ದ ಅಮೃತ ಐದು ತಿಂಗಳ ಗರ್ಭಿಣಿ ಸಹ ಆಗಿದ್ದರು.
‘ನಾನು ಮದುವೆ ಆಗಿರುವುದಾಗಲಿ ಮತ್ತು ಗರ್ಭಿಣಿಯಾಗಿದ್ದಾಗಲಿ ನಮ್ಮ ತಂದೆಗೆ ಇಷ್ಟವಿರಲಿಲ್ಲ. ನಾನು ಗರ್ಭಿಣಿ ಆಗಿರುವ ಸುದ್ದಿ ತಾಯಿಗೆ ತಿಳಿಸಿದ್ದೆ. ಆದ್ರೆ ಅವರು ನಿನ್ನ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸು ಎಂದು ಹೇಳಿದ್ದರು. ಆದ್ರೆ ಅದೇ ನಮ್ಮ ತಂದೆಗೆ ಈ ವಿಷಯ ತಿಳಿಸಿದ್ದಾಗ ಗರ್ಭಪಾತ ಮಾಡ್ಸು ಎಂದು ಹೇಳಿದ್ದರು’ ಅಂತಾ ಅಮೃತಾ ಹೇಳಿದ್ದಾರೆ.
‘ನಾವು ಎಲ್ಲೆ ಇದ್ದರು ನಮ್ಮ ತಂದೆಗೆ ತಿಳಿಯಿತಿತ್ತು. ಈ ವಿಷಯ ನಮ್ಮ ತಾಯಿಯೇ ನನ್ನ ಬಳಿ ಹೇಳಿದ್ದಾರೆ. ನಮ್ಮ ಮೇಲೆ ನಮ್ಮ ತಂದೆ ನಿಗಾವಹಿಸಿದ್ದರು. ನಮ್ಮ ಮೇಲೆ ನಿಗಾ ವಹಿಸಲು ನಮ್ಮ ತಂದೆ ಕೆಲ ಹುಡುಗರನ್ನು ಗೂಢಾಚಾರಿ ಕೆಲಸಕ್ಕೆ ಬಿಟ್ಟಿದ್ದರು ಎನ್ನಿಸುತ್ತಿತ್ತು’ ಎಂದು ಅಮೃತ ಹೇಳಿದರು.
‘ನಿನ್ನೆ ದಿನ ಏಕಾಏಕಿ ನಮ್ಮ ದಾಳಿ ನಡೆಯಿತು. ಈ ವೇಳೆ ದುಷ್ಕರ್ಮಿವೋರ್ವ ನನ್ನ ಗಂಡನನ್ನು ಕೊಲೆ ಮಾಡಿ ಪರಾರಿಯಾದನು. ನನ್ನ ಮೇಲೆಯೂ ಹಲ್ಲೆ ನಡೆಯಿತು. ಕೂಡಲೇ ನನ್ನ ಗಂಡ ಕೊಲೆಯಾದ ಸುದ್ದಿಯನ್ನು ನಮ್ಮ ತಂದೆಗೆ ತಿಳಿಸಿದೆ. ಆದ್ರೆ ಅವರು ನಿನ್ನ ಧ್ವನಿ ಸರಿಯಾಗಿ ಕೇಳುತ್ತಿಲ್ಲವೆಂದು ಫೋನ್ ಕಟ್ ಮಾಡಿದರು’ ಅಂತಾ ಅಮೃತಾ ತಮ್ಮ ತಂದೆಯ ವಿರುದ್ಧ ಆರೋಪಿಸಿದ್ದಾರೆ.
ಇನ್ನು ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರಯಾಗಿವೆ.