[1]ಮಂಗಳೂರು : ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿಯ ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕರಾಗಿರುವ ಡಾ. ಎಂ.ಎಲ್ ಗೀತಾ, ಇವರ ಕ್ವಾಲಿಟಿ ಆಫ್ ವರ್ಕ್ ಲೈಫ್ ಅಮಂಗ್ ಟೀಚಿಂಗ್ ಪ್ರೊಫೆಷನಲ್ಸ್ ವರ್ಕಿಂಗ್ ಇನ್ ಫಸ್ಟ್ ಗ್ರೇಡ್ ಕಾಲೇಜಸ್: ಎ ಸ್ಟಡಿ ವಿದ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಈ ಮಹಾ ಪ್ರಬಂಧವನ್ನು ಪ್ರೊ. ಈಶ್ವರ ಪಿ, ಮುಖ್ಯಸ್ಥರು, ವಾಣಿಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ. ಡಾ. ಎಂ.ಎಲ್ ಗೀತಾ ಇವರು ದಿ. ಲಕ್ಷ್ಮಣ ಎಂ ಮತ್ತು ಶ್ರೀಮತಿ ಶ್ರೀದೇವಿ ಕೆ ಇವರ ಪುತ್ರಿಯಾಗಿದ್ದು, ಪ್ರಾಥಮಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಶ್ರೀ ಕೆ ಆನಂದ ಇವರ ಪತ್ನಿ.