- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ತಿಂದು ಯುವಕರ ಚಾಲೆಂಜ್..!

belagavi [1]ಬೆಳಗಾವಿ: ಮಾಟ-ಮಂತ್ರಕ್ಕೆ ಬಳಸಿದ್ದ ತೆಂಗಿನಕಾಯಿ, ಬಾಳೆಹಣ್ಣು ಸೇವಿಸುವ ಮೂಲಕ ಬೆಳಗಾವಿಯ ಈ ಯುವಕರು ಮೌಢ್ಯಕ್ಕೆ ಸೆಡ್ಡು ಹೊಡೆದು ಗಮನ ಸೆಳೆದಿದ್ದಾರೆ.

ಖಾನಾಪುರ ಪಟ್ಟಣದ ಯುವಕರು ಇಂದು ಬೆಳಗ್ಗೆ ವಾಯು ವಿಹಾರಕ್ಕೆ ಹೋದಾಗ ಕಣ್ಣಿಗೆ ಕಂಡಿರುವ ಮಾಟ-ಮಂತ್ರಕ್ಕೆ ಬಳಸಿದ್ದ ಬಾಳೆ ಹಣ್ಣು, ತೆಂಗಿನಕಾಯಿ ಸೇವಿಸಿದ್ದಾರೆ.

ನಿನ್ನೆ ಮಹಾನವಮಿ ಅಮವಾಸ್ಯೆ ಆದ ಕಾರಣ ಖಾನಾಪುರ ಪಟ್ಟಣದ ನಿಟ್ಟೂರು ಕ್ರಾಸ್ ಬಳಿ ಮಾಟ-ಮಂತ್ರ ಮಾಡಿಸಲಾಗಿತ್ತು. ಮಾಟ-ಮಂತ್ರಕ್ಕೆ ತೆಂಗು, ಬಾಳೆಹಣ್ಣು, ಗಡಿಗೆ, ನಿಂಬೆಹಣ್ಣು ಸೇರಿದಂತೆ ಇನ್ನಿತರ ವಸ್ತು ಬಳಸಿದ್ದರು. ಮಾಟಕ್ಕೆ ಬಳಸಿದ್ದ ಬಾಳೆ, ತೆಂಗು ಸೇವಿಸಿರುವ ಖಾನಾಪುರದ ಯುವಕರು ಮಾಟ-ಮಂತ್ರದಂತ ಮೌಢ್ಯಗಳಿಂದ ಹೊರಬರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.