- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಡಗಿನ ಯುವಕ ಗೋವಾದಲ್ಲಿ ಶವವಾಗಿ ಪತ್ತೆ… ಕೊಲೆ ಶಂಕೆ

kodagu [1]ಕೊಡಗು: ಉದ್ಯೋಗ ಅರಸಿ ಗೋವಾಕ್ಕೆ ತೆರಳಿದ್ದ ಕೊಡಗಿನ ಯುವಕನೋರ್ವ ಅಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ಬಳಿಯಿದ್ದ ಹಣಕ್ಕಾಗಿ ಅಪರಿಚಿತರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಪಟ್ಟಣದ ವಿಜ್ನೇಶ್ ಮೃತ ಯುವಕ. ತಮಿಳುನಾಡು ಸೇರಿದಂತೆ ವಿವಿಧೆಡೆ ಮರಕೆಲಸ ಮತ್ತು ಪೇಂಟಿಂಗ್ ಮಾಡುತ್ತಿದ್ದ. ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದ ಎನ್ನಲಾಗ್ತಿದೆ.

ಬಡಗಾಂವ್ ಕೊಂಕಣ್ ಎನ್ನುವಲ್ಲಿ ರೈಲಿನಿಂದ ಆಯತಪ್ಪಿ ಬಿದ್ದು ಸಾವನಪ್ಪಿದ್ದಾನೆ ಎನ್ನಲಾಗುತ್ತಿದ್ದರೂ, ಮೃತ ದೇಹದ ಬಳಿ ಆತನಿಗೆ ಸೇರಿದ ಯಾವುದೇ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಈತನ ಬಳಿ ಇದ್ದ ಹಣವನ್ನು ದುಷ್ಕರ್ಮಿಗಳು ದೋಚಿ ರೈಲಿನಿಂದ ಹೊರಬಿಸಾಕಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

ಇದೀಗ ಗೋವಾ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಿಜ್ನೇಶ್ ಬಳಿಯಿದ್ದ ಗುರುತಿನಚೀಟಿ ಆಧರಿಸಿ ಸುಂಟಿಕೊಪ್ಪ ಪೊಲೀಸರಿಗೆ ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಮರಣೋತರ ಪರೀಕ್ಷೆ ನಡೆದಿದ್ದು, ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.