[1]ಬೆಂಗಳೂರು: ಕರ್ನಾಟಕದಲ್ಲಿ ಆಯುರ್ವೇದಿಕ್ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿನಿವೋರ್ವಳ ಬರ್ಬರ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದ ಲಾತೂರ್ನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಲಾತೂರ್ನ ವಿಶಾಲ್ನಗರದ ನಿವಾಸದಲ್ಲಿ ಯಾರು ವಾಸವಿಲ್ಲದ ವೇಳೆ ಕೆಲ ದುಷ್ಕರ್ಮಿಗಳು ಮನೆಗೆ ನುಗ್ಗಿ ಆಕೆಯ ಹೊಟ್ಟೆ ಹಾಗೂ ಕತ್ತಿನ ಮೇಲೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತದೇಹವನ್ನ ಈಗಾಗಲೇ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ 20 ವರ್ಷದ ವಿದ್ಯಾರ್ಥಿನಿ ಅಪೂರ್ವ ಅನಂತ್ರಾವ್ ಯಾದವ್ ಕರ್ನಾಟಕದ ಮೆಡಿಕಲ್ ಕಾಲೇಜ್ವೊಂದರಲ್ಲಿ ಆಯುರ್ವೇದಿಕ್ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ತನ್ನ ದ್ವಿತೀಯ ವರ್ಷದ ಪರೀಕ್ಷೆ ಮುಗಿಸಿದ ಬಳಿಕ ಆಕೆ ರಜೆ ನಿಮಿತ್ತ ಮನೆಗೆ ಆಗಮಿಸಿದ್ದಳು. ಮನೆಯಲ್ಲಿ ಯಾರು ಇಲ್ಲದ್ದ ವೇಳೆ ಆಕೆಯನ್ನ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ವಿದ್ಯಾರ್ಥಿನಿ ತಾಯಿ ಹೊರಗಡೆ ದೇವಸ್ಥಾನಕ್ಕೆ ಹಾಗೂ ತಂದೆ ಮೀರಜ್ಗೆ ತೆರಳಿದ್ದರು.
ತಾಯಿ ಮನೆಗೆ ವಾಪಸ್ ಆಗಿದ್ದಾಗ ಮಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದನು ನೋಡಿ ಚೀರಾಡಿದ್ದಾಳೆ. ಆ ವೇಳೆ ನೆರೆಯವರು ಬಂದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಇನ್ನು ವಿದ್ಯಾರ್ಥಿನಿ ತಂದೆ ಲಾತೂರ್ನಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದಾಗಿ ವರದಿಯಾಗಿದೆ. ಜತೆಗೆ ಒಬ್ಬಳೇ ಮಗಳು ಎಂದು ತಿಳಿದು ಬಂದಿದೆ.