[1]ಬೆಂಗಳೂರು: ಆಯುಧ ಪೂಜೆ ದಿನ ಕತ್ತಿ, ಡ್ರಾಗರ್ ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಮಾಜಿ ಡಾನ್ ಮುತ್ತಪ್ಪ ರೈ ಇಂದು ಸಿಸಿಬಿ ಕಚೇರಿಗೆ ಹಾಜರಾಗಿ ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ.
ಆಯುಧ ಪೂಜೆ ವೇಳೆ ಇಟ್ಟಿದ್ದ ರಿವಾಲ್ವರ್, ಬಂದೂಕುಗಳಿಗೆ ಲೈಸನ್ಸ್ ತೋರಿಸಿ ವಿಚಾರಣೆಗೆ ಹಾಜರಾಗುವಂತೆ ನಿನ್ನೆ ಸಿಸಿಬಿಯಿಂದ ರೈಗೆ ನೋಟಿಸ್ ನೀಡಲಾಗಿತ್ತು. ನೋಟಿಸ್ ತಲುಪಿದ 24 ತಾಸುಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ರೈಗೆ ಸಿಸಿಬಿ ಖಡಕ್ ಸೂಚನೆ ನೀಡಿದ್ದ ಹಿನ್ನೆಲೆ ಇಂದು ಮುತ್ತಪ್ಪ ರೈ ಎಸಿಪಿ ಮರಿಯಪ್ಪ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಮುತ್ತಪ್ಪ ರೈ ಆಯುಧ ಪೂಜೆ ದಿನದಂದು ಕತ್ತಿ, ಡ್ರಾಗರ್ ರಿವಾಲ್ವರ್ ಇಟ್ಟು ಪೂಜೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು.