ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ನಟಿ ರಾಗಿಣಿ ದ್ವಿವೇದಿ ಭೇಟಿ..!

9:57 AM, Monday, October 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

raginiಮಂಗಳೂರು: ಬಹುಭಾಷಾ ನಟಿ ರಾಗಿಣಿ ದ್ವಿವೇದಿ ನಿನ್ನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಸಂಜೆ ದೇವಸ್ಥಾನದ ಬಾಗಿಲು ತೆಗೆಯುವ ಮೊದಲೇ ಕಾರಿನಲ್ಲಿ ಬಂದು ಕಾದಿದ್ದ ರಾಗಿಣಿ ದ್ವಿವೇದಿ ದೇವಾಲಯದ ಬಾಗಿಲು ತೆಗೆಯುತ್ತಿದ್ದಂತೆ ದೇವಸ್ಥಾನದ ಬದಿಯ ಹೂವಿನ ಅಂಗಡಿಯಲ್ಲಿ ತಾವೇ ಮಲ್ಲಿಗೆ ಹೂವನ್ನು ಖರೀದಿಸಿ ತಂದು ದೇವರ ಪೂಜೆಗೆ ನೀಡಿದರು.

ತಲೆಗೆ ದುಪಟ್ಟಾ ಹೊದ್ದು ದೇವಾಲಯ ಪ್ರವೇಶಿಸಿದ ರಾಗಿಣಿ, ಈಗಷ್ಟೇ ಬಿಡುಗಡೆಯಾಗಿರುವ ‘ಟೆರರಿಸ್ಟ್’ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇನ್ನು ದೇವಾಲಯ ಸುತ್ತುತ್ತಿದ್ದಂತೆ ಅಲ್ಲಿಗೆ ಬಂದದ್ದು ರಾಗಿಣಿ ಎಂದು ತಿಳಿದ ದೇವಸ್ಥಾನದಲ್ಲಿದ್ದ ಭಕ್ತರು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಸೆಲ್ಫಿಗಾಗಿ ಬಂದ ಅಭಿಮಾನಿಗಳ ಮೊಬೈಲನ್ನು ತಾವೇ ಪಡೆದು ರಾಗಿಣಿ ಸೆಲ್ಫಿ ಕ್ಲಿಕ್ಕಿಸಿಕೊಟ್ಟರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English