- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೇರಳಕ್ಕೆ ಮರಳು ಅಕ್ರಮ ಸಾಗಾಟ: ಟಿಪ್ಪರ್, ಲಾರಿ ಮುಟ್ಟುಗೋಲು

Lorry [1]ಮಂಗಳೂರು: ಅಡ್ಯಾರ್ ಕಣ್ಣೂರಿಂದ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಟಿಪ್ಪರ್, ಲಾರಿಗಳನ್ನು ಸಂಚಾರಿ‌ ಪೊಲೀಸರು  ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಮುಟ್ಟುಗೋಲು ಹಾಕಿದ್ದಾರೆ.

ಸಬ್ ಇನ್ ಸ್ಪೆಕ್ಟರ್ ಕಬ್ಬಲ್ ರಾಜ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ಬೆಳಗ್ಗಿನ ಜಾವ ದಾಳಿ  ನಡೆಸಿ 10 ಚಕ್ರದ ಬೃಹತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಲಪಾಡಿ ಬಳಿ ಮುಟ್ಟುಗೋಲು ಹಾಕಿಕೊಂಡರು.

ತಲಪಾಡಿ ದೇವಿನಗರ ಮೂಲಕ ಕೇರಳಕ್ಜೆ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಮರಳನ್ನು ಅಕ್ರಮವಾಗಿ ಟಿಪ್ಪರ್ ನಲ್ಲೂ ಸಾಗಿಸಲಾಗುತ್ತಿತ್ತು. ಟಿಪ್ಪರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಬುಕಾರಿ ಕರೀಮ್ ಎಂಬವರು ಅಕ್ರಮ ಸಾಗಾಟ ವಾಹನದ ಮಾಲೀಕರು ಎಂದು ತಿಳಿದು ಬಂದಿದೆ.

ಆಶ್ಚರ್ಯ ವೆಂದರೆ ಇತ್ತೀಚೆಗೆ ಸರಕಾರ ಮುಟ್ಟುಗೋಲು ಹಾಕಿಕೊಂಡ ಮರಳನ್ನೇ ಅಕ್ರಮವಾಗಿ‌ ಕೇರಳಕ್ಕೆ  ಸಾಗಾಟ ಮಾಡಲಾಗುತ್ತಿತ್ತು.

ಇದನ್ನು ಪಾಂಡೇಶ್ವರ ರೌಡಿ ನಿಗ್ರಹದಳದ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ಇದನ್ನು ಬಿಡುವಂತೆ ಉಸ್ತುವಾರಿ ಸಚಿವರು ಕಡೆಯಿಂದ ಪೊಲೀಸರಿಗೆ ಒತ್ತಡ ಬಂದಿರುವುದು ವಿವಾದವಾಗಿತ್ತು.