ಕಾರು ಕಳವು ಪ್ರಕರಣ: ರೌಡಿಶೀಟರ್ ಸಹಿತ ಇಬ್ಬರ ಬಂಧನ

10:29 AM, Monday, October 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

arestedಮಂಗಳೂರು: ಪುತ್ತೂರಿನಲ್ಲಿ ಸ್ವಿಫ್ಟ್ ಕಾರು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ರೌಡಿಶೀಟರ್ ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಗೊಳ್ತಮಜಲು ಗ್ರಾಮದ ಕಲ್ಲಡ್ಕ ಮನೆ ನಿವಾಸಿ ರೌಡಿಶೀಟರ್ ಜುನೈದ್ ಅಲಿಯಾಸ್ ಜುನ್ನಿ ಮತ್ತು ಕೆದಿಲ ಗ್ರಾಮದ ಗಡಿಯಾರ ಮನೆ ನಿವಾಸಿ ಮೊಹಮ್ಮದ್ ಉನೈಸ್ ಬಂಧಿತ ಆರೋಪಿಗಳು.

ಬಂಧಿತರಿಂದ ಸ್ವಿಫ್ಟ್ ಕಾರು ಮತ್ತು ಕೃತ್ಯಕ್ಕೆ ಬಳಸಿದ ರಿಟ್ಜ್ ಕಾರು ಸಹಿತ 7.5 ಲಕ್ಷ ರೂ.ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಅ.23 ರಂದು ಸುಳ್ಯ ಶಾಂತಿನಗರದ ನಿವಾಸಿ‌ ಅಬ್ದುಲ್ ಅಝೀಝ್ ಎಂಬುವರ ಕಾರು ಸಂಪ್ಯ ಬಳಿಯಿಂದ ಕಳವಾದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English