- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ಯುವಕ ಮುಳುಗಿ ಸಾವು

mangalore [1]ಮಂಗಳೂರು: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಯುವಕ ಹೊಳೆಯಿಂದ ಮೇಲೆ ಬರಲಾಗದೆ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ದರ್ಖಾಸ್ ಹೊಳೆಯಲ್ಲಿ ನಡೆದಿದೆ.‌

ಸ್ಟೀವನ್ (24) ಮೃತ ಯುವಕ. ಈತ ಬೆಳ್ತಂಗಡಿ ಕನ್ನಾಜೆ ನಿವಾಸಿಯಾಗಿದ್ದು, ಮೂವರು ಗೆಳೆಯರ ಜೊತೆ ಸ್ನಾನ ಮಾಡಲು ಹೊಳೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಸ್ಥಳೀಯ ಈಜುಗಾರ ಇಸ್ಮಾಯಿಲ್ ಸಂಜಯ್ ನಗರ ಅವರು ನೀರಿನಲ್ಲಿ ಮುಳುಗಿದ್ದ ಸ್ಟೀವನ್ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.