ಅಕ್ರಮ ಗಾಂಜಾ ಸಾಗಾಟ: ಮೂವರು ಆರೋಪಿಗಳ ಬಂಧನ

10:10 AM, Saturday, November 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

police-officeಮಂಗಳೂರು: ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ಕ್ರಾಸ್ ಬಳಿ ರೌಡಿನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ಕರೆಪ್ಪ ಲಕ್ಷ್ಮಣ ಸುಣದೋಳಿ (50), ಬಿಜಾಪುರ ಜಿಲ್ಲೆಯ ಕೋಲಾರ ಕುರುಬರ ದಿನ್ನಿ ಗ್ರಾಮದ ಗಂಗೆಪ್ಪ ಮಾದೆರ (39), ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಾನಸಗೇರಿ ಗ್ರಾಮದ ಸಿದ್ದರಾಯಪ್ಪ ಕೂರಿ ಹೋಲಿ (36) ಬಂಧಿತ ಆರೋಪಿಗಳು. ಬಂಧಿತರಿಂದ 7.100 ಕೆ.ಜಿ. ಗಾಂಜಾ, 3 ಮೊಬೈಲ್ ಫೋನ್, 2 ದ್ವಿಚಕ್ರ ವಾಹನ ಹಾಗೂ 315 ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಕೇಂದ್ರ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕ ರವೀಶ್ ಎಸ್. ನಾಯಕ್, ಸಿಬ್ಬಂದಿಯಾದ ವೆಲೆಂಟಿನ್ ಡಿಸೋಜ, ಗಂಗಾಧರ್, ಸಂತೋಷ್ ಸಸಿಹಿತ್ಲು, ಕಿಶೋರ್, ಪ್ರಮೋದ್ ಕುಮಾರ್, ಬಸವರಾಜ್ ಮತ್ತು ಉರ್ವ ಪೊಲೀಸ್ ಠಾಣೆಯ ನಿರೀಕ್ಷಕಿ ವನಜಾಕ್ಷಿ , ಸಿಬ್ಬಂದಿಗಳಾದ ಬಾಲಕೃಷ್ಣ ಕೆ., ಸಂತೋಷ್, ರವಿ ಡಿ., ವಿನೋದ್, ಯೋಗೀಶ್, ಹೇಮಂತ್, ಶಂಕರಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English