- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಂದುವರೆದ ಶಬರಿಮಲೆ ವಿವಾದ: ಇಂದು 12 ಗಂಟೆಗಳ ಕಾಲ ಕೇರಳ ಬಂದ್

shabarimale [1]ಕೊಚ್ಚಿನ್: ಹಿಂದೂ ಐಕ್ಯ ವೇದಿ ಸಂಘಟನೆಯ ಅಧ್ಯಕ್ಷೆ ಕೆ.ಪಿ. ಶಶಿಕಲಾರನ್ನು ಕೇರಳ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು 12 ಗಂಟೆಗಳ ಕೇರಳ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ.

ಶಬರಿಮಲೆ ಕರ್ಮ ಸಮಿತಿಯು 12 ಗಂಟೆಗಳ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿದ್ದು, ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ರಾತ್ರಿ ವೇಳೆ ಶಶಿಕಲಾ ಪ್ರಯಾಣಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಕ್ಕೆ ಅವರನ್ನು ಸನ್ನಿಧಾನಂನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ.

ಇನ್ನೊಂದೆಡೆ, ನಿನ್ನೆಯಷ್ಟೆ ಅಯ್ಯಪ್ಪನ ದೇಗಲು ಪ್ರವೇಶಿಸಲು ಮುಂದಾದ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರನ್ನು ಕಾನೂನು-ಸುವ್ಯವಸ್ಥೆ ದೃಷ್ಟಿಯಿಂದ ಪುಣೆಗೆ ವಾಪಾಸ್ ಕಳುಹಿಸಲಾಯಿತು. ಈ ಬಗ್ಗೆ ಆಕ್ರೋಶ ವ್ಯವ್ತಪಡಿಸಿರುವ ತೃಪ್ತಿ, ಮುಂದಿನ ಬಾರಿ ಯಾರಿಗೂ ತಿಳಿಯದಂತೆ ಗೆರಿಲ್ಲಾ ತಂತ್ರದ ಮೂಲಕ ದೇಗುಲ ಪ್ರವೇಶಿಸಿಯೇ ತೀರುತ್ತೇನೆ ಎಂದು ಹೇಳಿದ್ದಾರೆ.

ಅಯ್ಯಪ್ಪನ ಭಕ್ತರೆಂದು ಹೇಳಿಕೊಳ್ಳುವವರು ಅವಾಚ್ಯವಾಗಿ ನಿಂದಿಸಿ, ಬೆದರಿಕೆಯೊಡ್ಡಿದರು. ಅಲ್ಲದೆ, ಕೇರಳ ಸರ್ಕಾರ ಮಹಿಳೆಯರ ಪ್ರವೇಶಕ್ಕೆ ಅಗತ್ಯ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.