ಮೀನುಗಳಿಗೆ ತಡೆ: ಗೋವಾದ ಮೀನುಗಾರಿಕಾ ಸಚಿವರ ಜೊತೆ ಶೀಘ್ರ ಮಾತುಕತೆ: ಯು.ಟಿ. ಖಾದರ್​

2:34 PM, Saturday, November 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

circuit-houseಮಂಗಳೂರು: ಗೋವಾದಲ್ಲಿ ಕರ್ನಾಟಕದ ಮೀನುಗಳಿಗೆ ತಡೆಯೊಡ್ಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾದ ಮೀನುಗಾರಿಕಾ ಸಚಿವರ ಜೊತೆ ಕರ್ನಾಟಕದ ಮೀನುಗಾರಿಕಾ ಸಚಿವರು ಶೀಘ್ರ ಮಾತನಾಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಕರಾವಳಿ ಕರ್ನಾಟಕದ ಪ್ರಮುಖ ಉದ್ಯಮ. ಇಲ್ಲಿಯ ಮೀನುಗಳು ಅಲ್ಲಿಗೆ ಹೋಗಬಾರದೆಂದು ತಡೆಯುವುದು ಸರಿಯಲ್ಲ. ಭಾರತ ದೇಶದಲ್ಲಿ ಸೀಮಿತ ಪ್ರದೇಶಕ್ಕೆ ವ್ಯಾಪಾರ ಮಾಡಲು ಸಾಧ್ಯವಿಲ್ಲ. ನಾನು, ಕಾರವಾರ ಉಸ್ತುವಾರಿ ಸಚಿವರು ಹಾಗೂ ಮೀನುಗಾರಿಕಾ ಸಚಿವರು ಭೇಟಿಯಾಗಿ ಚರ್ಚೆ ನಡೆಸಲಿದ್ದೇವೆ. ಬಳಿಕ ಕರ್ನಾಟಕದ ಮೀನುಗಾರಿಕಾ ಸಚಿವರು ಗೋವಾದ ಮೀನುಗಾರಿಕಾ ಸಚಿವರೊಂದಿಗೆ ಮಾತನಾಡಲಿದ್ದಾರೆ ಎಂದರು.

circuit-house-2ಕಸಾಯಿಖಾನೆ ಅಭಿವೃದ್ಧಿ ಸಂಬಂಧಿಸಿದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅನುದಾನ ನೀಡುವ ಪ್ರಸ್ತಾವದ ಬಗ್ಗೆ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗೆ ಬರೆದ ಪತ್ರಕ್ಕೆ‌ ಉತ್ತರ ಬಂದಿಲ್ಲ. ಮತ್ತೊಮ್ಮೆ ಅವರಿಗೆ ಪತ್ರ ಬರೆದು ನೆನಪಿಸಲಾಗುವುದು ಎಂದರು. ಈ ವಿಚಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಕೂಡ ಕನಿಷ್ಠ ನನಗೆ ಒಂದು ಪತ್ರ ಬರೆದಿಲ್ಲ. ಅವರ ಹೇಳಿಕೆ ಕೇವಲ ಪತ್ರಿಕೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English