[1]ಹೈದರಾಬಾದ್: ಚುನಾವಣೆಗಾಗಿ ಮಾತ್ರ ರಾಹುಲ್ ಗಾಂಧಿ ರಾಮ ನಾಮ ಜಪಿಸುತ್ತಾರೆ, ಅಲ್ಲದೆ ಶಿವ ಭಕ್ತರೂ ಆಗ್ತಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದರು.
ರಾಮಗುಂಡಂನಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇನ್ನೆಷ್ಟು ದಿನಗಳ ಕಾಲ ನೀವು (ಕಾಂಗ್ರೆಸ್) ಧರ್ಮದ ಹೆಸರಿನಲ್ಲಿ ಜನರನ್ನು ದಾರಿ ತಪ್ಪಿಸುತ್ತೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ರಾಮ ಇರಲೇ ಇಲ್ಲ ಎಂದು ವಾದಿಸಿದ್ದರು. ಈಗ ಚುನಾವಣೆಗಾಗಿ ಅವರು ರಾಮ ನಾಮ ಮಾತ್ರ ಜಪಿಸುತ್ತಿಲ್ಲ, ಜತೆಗೆ ಶಿವ ಭಕ್ತರೂ ಆಗಿದ್ದಾರೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಕ್ರಮಗಳನು ನೀಡಿದ್ದರೂ ತೆಲಂಗಾಣ ಸರ್ಕಾರ ಜನರಿಗೆ ಒದಗಿಸುವಲ್ಲಿ ಸೋತಿದೆ ಎಂದು ಆರೋಪಿಸಿದರು. ಈ ವೇಳೆ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ವಿವರಿಸಿದರು.