ಕಳ್ಳತನ ಆರೋಪ: ಬೆಂಗಳೂರಲ್ಲಿ ಉದ್ಯಮಿಯಿಂದ‌ ಮಕ್ಕಳ ಅಪಹರಣ

3:12 PM, Wednesday, December 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

bengaluruಬೆಂಗಳೂರು: ಸೈಕಲ್ ಕಳ್ಳತನ ಮಾಡಿದ ಆರೋಪದ ಮೇರೆಗೆ ಟ್ಯೂಷನ್ ಕ್ಲಾಸ್ಗೆ ನುಗ್ಗಿ‌ ಮಕ್ಕಳನ್ನು ಅಪಹರಣ ಮಾಡಿದ ಘಟನೆ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಒಬ್ಬ ಸೈಕಲ್ ಕಳ್ಳತನ‌ ಮಾಡಿದ್ದ ಎಂದು ಆರೋಪಿಸಿ ಭಾಸ್ಕರ್ ಮತ್ತು ವಿನೋದ್ ಎಂಬ ಮಕ್ಕಳನ್ನ ಇನೋವಾ ಕಾರಿನಲ್ಲಿ ಉದ್ಯಮಿ ಕೃಷ್ಣಮೂರ್ತಿ ಅಂಡ್ ಗ್ಯಾಂಗ್ ಅಪಹರಣ ಮಾಡಿತ್ತು. ನಂತರ ಮನೆಯೊಂದರಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಹಲ್ಲೆ ನಡೆಡಸಿದ್ದಾರೆ ಎನ್ನಲಾಗಿದೆ.

ಈ ಕುರಿತು ವಿದ್ಯಾರ್ಥಿಗಳ ಪೋಷಕರು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಕ್ಕಳನ್ನ ರಕ್ಷಿಸಿ, ಪ್ರಕರಣ ಸಂಬಂಧ ಕೃಷ್ಣಮೂರ್ತಿ ಮತ್ತು ಅವಿನಾಶ್ ಎಂಬುವರನ್ನು ಬಂಧಿಸಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English