[1]ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಖಾತೆಗೆ ಕನ್ನ ಹಾಕಿದ್ದವನನ್ನು ಬಂಧಿಸುವಲ್ಲಿ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಕೋಲ್ಕತ್ತಾ ಮೂಲದ ಎಲೆಕ್ಟ್ರಿಷಿಯನ್ ಕಿಶೋರ್ ಕುಮಾರ್ (28) ಬಂಧಿತ ವ್ಯಕ್ತಿ. ಅಕ್ಟೋಬರ್ 15 ರಂದು ಬ್ಯಾಂಕ್ ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಸೋಗಿನಲ್ಲಿ ಹಿರಿಯ ಅಧಿಕಾರಿ ಆಶೀತ್ ಮೋಹನ್ ಪ್ರಸಾದ್ಗೆ ಕರೆ ಮಾಡಿದ್ದ ಆರೋಪಿ, ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದಿದೆ, ನವೀಕರಣ ಮಾಡಬೇಕು ಅಂತಾ ಖಾತೆಯ ವಿವರಗಳನ್ನ ಪಡೆದಿದ್ದ. ಬಳಿಕ ಮತ್ತೊಂದು ನಂಬರಿನಿಂದ ಕರೆ ಮಾಡಿ ಇನ್ನೊಂದು ಖಾತೆಯ ವಿವರಗಳನ್ನೂ ಪಡೆದಿದ್ದ. ಕರೆ ಸ್ಥಗಿತಗೊಳ್ಳುದ್ದಂತೆ ಎರಡೂ ಖಾತೆಗಳಿಂದ ತಲಾ ಒಂದೊಂದು ಲಕ್ಷ ರೂಪಾಯಿ ಎಗರಿಸಿದ್ದ.
ಈ ಕುರಿತು ರಾಜ್ಯ ಪೋಲಿಸ್ ಆಂತರಿಕ ಭದ್ರತಾ ವಿಭಾಗದ ಮುಖ್ಯಸ್ಥ ಆಶಿತ್ ಮೋಹನ್ ಪ್ರಸಾದ್ ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ದಾಖಲಿಸಿದ್ದರು. ಇದೀಗ ತನಿಖೆ ನೆಡೆಸಿದ ಪೊಲೀಸರು ಕಾಲ್ ಡಿಟೈಲ್ಸ್ ಹಾಗೂ ಬ್ಯಾಂಕ್ ಖಾತೆಯ ಮಾಹಿತಿ ಆಧಾರದಲ್ಲಿ ಆರೋಪಿಯನ್ನ ಬಂಧಿಸಿದ್ದಾರೆ.