- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನನ್ನನ್ನು ನೋಡಿದರೆ ಅಸಮಾಧಾನ ಇರುವ ಹಾಗೇ ಕಾಣುತ್ತಿದೆಯಾ: ಸಿಎಂ ಕುಮಾರಸ್ವಾಮಿ

kumarswamy [1]ಬೆಂಗಳೂರು: ನಿಗಮ ಮಂಡಳಿ ವಿಚಾರದಲ್ಲಿ ಅಸಮಾಧಾನ ಇಲ್ಲ, ನನ್ನನ್ನು ನೋಡಿದರೆ ಅಸಮಾಧಾನ ಇರುವ ಹಾಗೇ ಕಾಣುತ್ತಿದೆಯಾ ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ನಾಯಕರು ನೀಡಿರುವ ಪಟ್ಟಿ ರಾಜ್ಯಪಾಲರಿಗೆ ಕಳಿಸಿದ್ದೇನೆ. ಖಾತೆ ಹಂಚಿಕೆಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಬಸವರಾಜ ಹೊರಟ್ಟಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕೆಲವರು ಚರ್ಚೆ ಮಾಡುತ್ತಾರೆ. ಅದು ವಯಕ್ತಿಕ. ಅದಕ್ಕೆ ನಾನು ಜವಾಬ್ದಾರಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ತಿಳಿಸಿದರು.

ಇನ್ನು ರಮೇಶ್ ಜಾರಕಿಹೊಳಿ ದೆಹಲಿಗೆ ಹೊರಟಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಅವರೇನೋ ಚರ್ಚೆ ಮಾಡುವುದಕ್ಕೆ ಹೋಗಿರುತ್ತಾರೆ‌ ಅದರಲ್ಲಿ ನಮ್ಮದು ತಪ್ಪೇನಿದೆ ಎಂದು ಸ್ಪಷ್ಟಪಡಿಸಿದರು.