[1]ತೊಕ್ಕೊಟ್ಟು : ಮೊಬೈಲಿನಲ್ಲಿ ಮಾತನಾಡುತ್ತಾ ಬಂದು ಅಳುತ್ತಾ ಯುವತಿ ಯೋರ್ವಳು ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ನೇತ್ರಾವತಿ ಸೇತುವೆಯಲ್ಲಿ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ನೇತ್ರಾವತಿ ಸೇತುವೆಯಲ್ಲಿ ಒಂಟಿ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಬೈಕನ್ನು ನಿಲ್ಲಿಸಿದ್ದರು.”ಏನಾದ್ರೂ ಸಹಾಯ ಮಾಡಬೇಕಾ’ ಎಂದು ಕೇಳುವಷ್ಟರಲ್ಲಿ ಆಕೆ ಏಕಾಏಕಿ ನದಿಗೆ ಹಾರಿದ್ದಾಳೆ. ಕತ್ತಲು ಆವರಿಸಿದ್ದರಿಂದಾಗಿ ನದಿಗೆ ಹಾರುವ ಧೈರ್ಯ ಆಗಲಿಲ್ಲ ಎಂದು ಬೈಕ್ ಸವಾರರು ತಿಳಿಸಿದ್ದಾರೆ.
ಆಕೆ ಸುಮಾರು 22ರ ಹರೆಯದ ಯುವತಿಯಾಗಿದ್ದು, ಹೆಗಲಿನಲ್ಲಿ ಬ್ಯಾಗ್ ಮತ್ತು ಯೂನಿಫಾರಂ ಧರಿಸಿದ್ದ ರೀತಿಯಲ್ಲಿ ಕಂಡುಬಂದಿತ್ತು. ಕೆಲಸದ ಯೂನಿಫಾರಂ ಅಥವಾ ಕಾಲೇಜು ವಿದ್ಯಾರ್ಥಿನಿಯೋ ಎಂಬುದು ಸ್ಪಷ್ಟವಾಗಿಲ್ಲ ಎಂದು ಬೈಕ್ ಸವಾರರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.