- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜನವರಿ 20 ರಂದು ಮಂಗಳೂರಿನಲ್ಲಿ ಗಾಣಿಗ ಸಂಗಮ – 2019

Ganiga [1]ಮಂಗಳೂರು : ಗಾಣಿಗಾಸ್ ಯಾನೇ ಸಫಲಿಗಾಸ್ ಪರಿವಾರ್ ( ರಿ ) ಫೇಸ್‌ಬುಕ್ ತಂಡದ ವತಿಯಿಂದ “ಗಾಣಿಗ ಪರಿವಾರ್ “ ವೇದಿಕೆಯಲ್ಲಿ 4ನೇ ವರ್ಷದ ಗಾಣಿಗ ಸಂಗಮ – 2019 ನೃತ್ಯ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜನವರಿ 20 ರಂದು ಬೆಳಗ್ಗೆ 8 . 30 ಕ್ಕೆ ನಗರದ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ .

ಈ ಕಾರ್ಯಕ್ರಮದಲ್ಲಿ ಗುಂಪು ನೃತ್ಯ ಸ್ಪರ್ಧೆ ಮತ್ತು ವೈಯುಕ್ತಿಕ ನೃತ್ಯ ಸ್ಪರ್ಧೆಗೆ ಅವಕಾಶವಿದ್ದು , ಜೂನಿಯರ್ , ಸಬ್ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ . ವಿಜೇತರಿಗೆ ಆಕರ್ಷಕ ಬಹುಮಾನವಿದ್ದು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಅಪೂರ್ವ ಸಾಧನೆಯನ್ನು ಮಾಡಿದಂತಹ ಸಾಧಕರಿಗೆ ಸನ್ಮಾನ, ಆಸಕ್ತ ಕುಟುಂಬಗಳಿಗೆ ಸಹಾಯ ಧನ ಹಂಚಿಕೆ ಕಾರ್ಯಕ್ರಮ ಕೂಡ ಜರುಗಲಿದೆ.

ಈ ಬಾರಿಯ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಭಾರತೀಯ ಭೂ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ಶ್ರೀಯುತ ದಾಮೋದರ್ ಎಸ್ , ಜೀ ಕನ್ನಡ ಟಿವಿ ವಾಹಿನಿಯ ಕಾಮಿಡಿ ಕಿಲಾಡಿ ಕಾರ್ಯಕ್ರಮದ ರನ್ನರ್ ಅಪ್ ಆಗಿರುವ ಸೂರಜ್ ಕುಮಾರ್, ಅಂತರಾಷ್ಟ್ರೀಯ ಕರಾಟೆ ಪಟು ರಂಜಿತ ಎಸ್ ಮುಂಡ್ಕೂರು, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಅಂತಹ ನೃತ್ಯ ಪಟು ಗೌತಮ್ ಗಾಣಿಗ ಇನ್ನು ಹಲವಾರು ಗಣ್ಯಾತಿಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ .ಗಾಣಿಗ ಕಲಾವಿದರಿಂದ ವಿವಿಧ ಮನೋರಂಜನ ಕಾರ್ಯ ಕ್ರಮಗಳು ಜರಗಲಿರುವುದು.

ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಸ್ಪರ್ಧಾಳುಗಳ ಹಾಗೂ ಜನಸ್ತೋಮದ ನೀರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.