[1]ಮಂಗಳೂರು : ಡಾ ಅಣ್ಣಯ್ಯ ಕುಲಾಲ್ ಮತ್ತು ಕುಲಾಲ್ ಕುಂಬಾರ ಯುವವೇದಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಪ್ರಸಾದ್ ಸಿದ್ದಕಟ್ಟೆ ಕುಲಾಲ್ ಸಂಘದ ಕಾರ್ಯದರ್ಶಿಯವರನ್ನು ಡಾ ಅಣ್ಣಯ್ಯ ಕುಲಾಲ್ ಪ್ರಶ್ನಿಸಿ, ಯಾಕೆ ಹೀಗೆ ಮಾಡುತ್ತಿ ಇನ್ನು ಹೀಗೆ ಮಾಡ ಬೇಡ ಅಂತ ಬುದ್ದಿವಾದ ಹೇಳಿದ್ದರು ಎನ್ನಲಾಗಿದೆ.
ಆದರೆ ಪ್ರಸಾದ್ ಸಿದ್ದಕಟ್ಟೆ ನನ್ನನ್ನು ಬೆದರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಣ್ಣಯ್ಯ ಕುಲಾಲ್ ನನ್ನ ವಿರುದ್ಧ ಸುಳ್ಳು ದೂರು ಕೊಟ್ಟು ನನ್ನ ಹೆಸರು ಕೆಡಿಸಲು ಪ್ರಯತ್ನ ಮಾಡಿರುತ್ತಾನೆ ಎಂದಿದ್ದಾರೆ .
ಸಮಾಜ ಮುಖೀ ಚಿಂತಕರಾದ ಡಾ ಅಣ್ಣಯ್ಯ ಕುಲಾಲ್ ರವರ ಹೆಸರು ಕೆಡಿಸಲು, ಅವರ ಬಗ್ಗೆ ತಪ್ಪು ಸಂದೇಶ ಹೋಗುವಂತೆ ಮಾಡಿ, ಸಮಾಜ ವಿರೋಧಿ ಕೆಲಸ ಮಾಡುವ ಜಿಲ್ಲಾ ಕುಲಾಲ್ ಸಂಘದ ಕಾರ್ಯದರ್ಶಿ ಪ್ರಸಾದ್ ಸಿದ್ದಕಟ್ಟೆ ಯನ್ನ ಈ ಕೂಡಲೇ ಕುಲಾಲ್ ಮಾತೃ ಸಂಘ ದಿಂದ ವಜಾ ಗೊಳಿಸಬೇಕು, ಮತ್ತು ಈ ಸುಳ್ಳು ದೂರನ್ನ ಹಂಚಿಕೊಳ್ಳ ಬಾರದು ಎಂದು -ಕುಲಾಲ್ ಯುವ ವೇದಿಕೆ ವಿನಂತಿಸಿದೆ.