[1]ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎರಡನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್ ಅವರನ್ನು 3,49,599 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪಕ್ಷದ ಟಿಕೆಟ್ ಹಂಚುವ ಮೊದಲೇ ಸ್ವಪಕ್ಷೀಯದವರಿಂದಲೇ ಗೋ ಬ್ಯಾಕ್ ಶೋಭಾ ಎಂಬ ಅಭಿಯಾನ ಆರಂಭಿಸಿ ತೀವ್ರ ಮುಖಭಂಗ ಅನುಭವಿಸಿದ್ದ ಶೋಭಾ ಇದೀಗ ಮೋದಿ ಅಲೆಯಲ್ಲಿ ಮತ್ತೆ ಗೆದ್ದು ವಿಜಯದ ನಗುಬೀರಿದ್ದಾರೆ.
ಮೋದಿ ಅಲೆ ಮುಂದೆ ಕಾಂಗ್ರೆಸ್ – ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸೋಲನ್ನಪ್ಪಿದ್ದಾರೆ. ಶೋಭಾ ಕರಂದ್ಲಾಜೆ 7,18,916ಮತಗಳನ್ನು ಪಡೆದಿದ್ದು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನು ಪಡೆದಿದ್ದಾರೆ.