- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಐತೂರು ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ

Prem-singh-nayak [1]ಮಂಗಳೂರು :  ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯಿತಿ ಪಿಡಿಒ ಪ್ರೇಮ್ ಸಿಂಗ್ ನಾಯಕ್ ಜಾಗದ ಖಾತೆ ಬದಲಾವಣೆಗೆ ಲಂಚ ಪಡೆಯುವಾಗ ಎಸಿಬಿ ಬಲೆಗೆ  ಬಿದ್ದಿದ್ದಾರೆ.

ಕಡಬ ನಿವಾಸಿ ಸಾಹುಲ್ ಹಮೀದ್ ಎಂಬುವರ ತಾಯಿಯ ಹೆಸರಿಂದ ಸಾಹುಲ್ ಹೆಸರಿಗೆ 10.4 ಸೆಂಟ್ಸ್ ಜಾಗದ ಖಾತೆ ಬದಲಾವಣೆಗೆ 9/11ರ ಅರ್ಜಿ ಸಲ್ಲಿಸಿದ್ದರು. ಮೊದಲು 8 ಸಾವಿರ ರೂ. ಜಮಾ ಮಾಡಿದ್ದಾರೆ. ಮತ್ತೆ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸೋಮವಾರ ಗುರುವಾಯನಕೆರೆಗೆ ಬಂದು ಹಣ ನೀಡುವಂತೆ ಹೇಳಿದ್ದರಂತೆ. 9 ಸಾವಿರ ನೀಡುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ. ಬಂಧಿಸಿ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೊಳಪಡಿಸಿದ್ದಾರೆ.

ಪಶ್ಚಿಮ ವಲಯ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ಅವರ ನಿರ್ದೇಶನದ ಮೇರೆಗೆ ಇನ್ಸ್ಪೆಕ್ಟರ್ ಮೋಹನ್ ಕೊಟ್ಟಾರಿ, ಉಡುಪಿ ಇನ್ಸ್ಪೆಕ್ಟರ್ ಜಯರಾಂ ಗೌಡ, ಸಿಬ್ಬಂದಿ ಹರಿಪ್ರಸಾದ್, ಗಣೀಶ್, ಉಮೇಶ್, ರಾಧಾಕೃಷ್ಣ ಡಿ.ಎ., ರಾಧಾಕೃಷ್ಣ ಕೆ., ಪ್ರಶಾಂತ್, ರಾಕೇಶ್, ಅಬ್ದುಲ್ ಜಲಲ್, ಪ್ರಸನ್ನ, ನಯನಾ, ವೈಶಾಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.