ಅಪರಿಚಿತ ವ್ಯಕ್ತಿಗಳಿಂದ ಉಡುಪಿ ಸಿಟಿ ಬಸ್ ಮಾಲೀಕನ ಹತ್ಯೆ

3:35 PM, Friday, July 12th, 2019
Share
1 Star2 Stars3 Stars4 Stars5 Stars
(No Ratings Yet)
Loading...

Bus Ownerಉಡುಪಿ : ಇಬ್ಬರು ಅಪರಿಚಿತ ವ್ಯಕ್ತಿಗಳು ಉಡುಪಿ ಸಿಟಿ ಬಸ್ ಮಾಲೀಕರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪೆರ್ಡೂರು ಬಳಿಯ ದೂಪದಕಟ್ಟೆ ಬಳಿ ಜು.11 ರ ಗುರುವಾರ ರಾತ್ರಿ ನಡೆದಿದೆ.

ಉಡುಪಿಯ ವೈಷ್ಣವಿ ಸಿಟಿ ಬಸ್ ಮಾಲೀಕ ಹಾಗೂ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಪೂಜಾರಿ ಎನ್ನುವವರೇ ಕೊಲೆಗೀಡಾದ ದುರ್ದೈವಿಯಾಗಿದ್ದಾರೆ.

ಗುರುವಾರ ರಾತ್ರಿ ತಡ ರಾತ್ರಿ ಅಪರಿಚಿತರಿತರಿಬ್ಬರು ಮನೆಗೆ ಬಂದಿದ್ದು ಸುಮಾರು ಹೊತ್ತು ಮಾತನಾಡುತ್ತಿದ್ದರು ಎನ್ನಲಾಗಿದ್ದು ಆ ಬಳಿಕ ಮಾತಿಗೆ ಮಾತು ಬೆಳೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಿರುಚಿದ ಶಬ್ದ ಕೇಳಿ ಪ್ರಶಾಂತ್ ಹೆಂಡತಿ ಓಡಿ ಬರುತ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಹಲವು ವರುಷಗಳಿಂದ ಸಿಟಿ ಬಸ್ ನಲ್ಲಿ ಕಂಡಕ್ಟರ್ ಅಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಪೂಜಾರಿ ಇದೀಗ ಸ್ವಂತ ಬಸ್ಸು ಖರೀದಿಸಿ ,ಸ್ವತಃ ಕಂಡಕ್ಟರ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು,ಸಿಟಿ ಬಸ್ ನಿಲ್ದಾಣದಲ್ಲಿ ಎಲ್ಲರೊಂದಿಗೂ ಉತ್ತಮ ಓಡನಾಟವಿದ್ದ ಪ್ರಶಾಂತ್ ಪೂಜಾರಿ ಶಾಂತ ಸ್ವಭಾವದವರಾಗಿದ್ದರು, ಯಾರೊಂದಿಗೂ ಹೆಚ್ಚಾಗಿ ಬೆರೆಯದೇ ತನ್ನ ಕೆಲಸಕಷ್ಟೇ ಸೀಮಿತವಾಗಿದ್ದರು ಎನ್ನಲಾಗಿದೆ. ಪ್ರಶಾಂತ್ ಪೂಜಾರಿ ಕೊಲೆಯಿಂದ ಇಡೀ ಸಿಟಿ ಬಸ್ ನೌಕರರು ಅತಂಕವನ್ನುಂಟು ಮಾಡಿದೆ.ಪ್ರಶಾಂತ್ ಪೂಜಾರಿ ಕೊಲೆಗಾರರನ್ನು ಶೀಘ್ರ ಪತ್ತೆ ಹಚ್ಚುವಂತೆ ಸಿಟಿ ಬಸ್ ನೌಕರರ ಸಂಘ ಅಗ್ರಹಿಸಿದೆ.

ಸ್ಥಳಕ್ಕೆ ಹಿರಿಯಡ್ಕ ಪೊಲೀಸರು ಭೇಟಿ ನೀಡಿ ಪರಿಸೀಲಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಕೊಲೆ ನಡೆದಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English