ಸಮ್ಮಿಶ್ರ ಸರಕಾರ ಸ್ಥಿರವಾಗಿದೆ : ಯು.ಟಿ. ಖಾದರ್

2:34 PM, Wednesday, July 17th, 2019
Share
1 Star2 Stars3 Stars4 Stars5 Stars
(No Ratings Yet)
Loading...

khader ಮಂಗಳೂರು : ಸಮ್ಮಿಶ್ರ ಸರಕಾರ ಸ್ಥಿರವಾಗಿದೆ,  ಸರಕಾರ ವಿಶ್ವಾಸ ಮತಗಳಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾಗಿ ರಚನೆಯಾದ ಸರಕಾರ, ಅದರ ನೀತಿ ನಿಯಮಗಳ ಪ್ರಕಾರ ನಡೆಯುತ್ತಿದೆ. ವಿರುದ್ಧವಾಗಿ ನಡೆದುಕೊಂಡವರ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ರಾಜ್ಯದ ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚಿಸಲು ಸ್ಪೀಕರ್ ಅವರ ಅನುಮತಿ ಕೇಳಿದ್ದಾರೆ. ಆ ಪ್ರಕಾರ ಸ್ಪೀಕರ್ ಅನುಮತಿ ನೀಡಿದ್ದಾರೆ. ಅದರಂತೆ ಗುರುವಾರ ವಿಶ್ವಾಸ ಮತದ ಮೇಲೆ ಚರ್ಚೆ ಆರಂಭವಾಗುತ್ತದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಮ್ಮಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಬೇರೆ ಬೇರೆ ಅಲ್ಲ. ನಮ್ಮ ಸರ್ಕಾರ ಒಂದೇ, ಅದೇ ಸಮ್ಮಿಶ್ರ ಸರ್ಕಾರ. ನಾವು ವಿಶ್ವಾಸ ಮತ ಗೆಲ್ಲುತ್ತೇವೆ. ಪ್ರಜಾಪ್ರಭುತ್ವದ ಅನುಸಾರ ಆಯ್ಕೆಯಾದವರು ನಾವು. ನಮ್ಮನ್ನು ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಕರ್ನಾಟಕದಿಂದ ಇಡೀ ದೇಶಕ್ಕೆ ಸಂದೇಶ ಹೋಗುತ್ತದೆ ಎಂದು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English